ಉಡುಪಿ:ಕಡಿಯಾಳಿ ಕಾತ್ಯಾಯಿನಿ ಕಲ್ಯಾಣ ಮಂಟಪ ಹಾಗೂ ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ನಡುವೆ ಸುಮಾರು 50 ವರ್ಷಗಳಿಂದ ಇದ್ದ ವಿವಾದವು ಶಾಸಕ ಕೆ. ರಘುಪತಿ ಭಟ್ ಅವರ ನೇತೃತ್ವದಲ್ಲಿ ಮಂಗಳವಾರ ನಡೆದ ಸಂಧಾನ ಸಭೆಯಲ್ಲಿ ಯಶಸ್ವಿಯಾಗಿ ಬಗೆಹರಿದೆ. ಆ ಮೂಲಕ 50 ವರ್ಷಗಳಿಂದ ಬಗೆಹರಿಯದೆ ಇದ್ದ ವಿವಾದಕ್ಕೆ ಕೊನೆಗೂ ತೆರೆಬಿದ್ದಿದೆ.
ಸಭೆಯಲ್ಲಿ ಕಡಿಯಾಳಿ ಕಾತ್ಯಾಯಿನಿ ಮಂಟಪದ ಸರ್ವಮಂಗಳ ಟ್ರಸ್ಟಿನ ಮುರುಳಿ ಕೃಷ್ಣ ಉಪಾಧ್ಯ ಶಾಸಕ ರಘುಪತಿ ಭಟ್ ಅವರ ಮನವಿಯಂತೆ ಕಡಿಯಾಳಿ ಕಾತ್ಯಾಯಿನಿ ಕಲ್ಯಾಣ ಮಂಟಪವನ್ನು ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನಕ್ಕೆ ಧರ್ಮಾರ್ಥವಾಗಿ ನೀಡಲು ಒಪ್ಪಿಗೆ ನೀಡಿದರು. ಜೂನ್ 3 ರಂದು ಬ್ರಹ್ಮಕಲಶೋತ್ಸವದ ಪರ್ವಕಾಲದಲ್ಲಿ ಕಾತ್ಯಾಯಿನಿ ಕಲ್ಯಾಣ ಮಂಟಪದ ಬೀಗದ ಕೀಯನ್ನು ಶಾಸಕರ ಮೂಲಕ ದೇಗುಲಕ್ಕೆ ಹಸ್ತಾಂತರಿಸಲಾಗುತ್ತದೆ.
ಮನವಿಗೆ ಪೂರಕವಾಗಿ ಸ್ಪಂದಿಸಿದ ಕಡಿಯಾಳಿ ಕಾತ್ಯಾಯಿನಿ ಮಂಟಪದ ಸರ್ವಮಂಗಳ ಟ್ರಸ್ಟಿನ ಮುರುಳಿ ಕೃಷ್ಣ ಉಪಾಧ್ಯ ಅವರಿಗೆ ಶಾಸಕ ರಘುಪತಿ ಭಟ್ ಸಮಸ್ತರ ಪರವಾಗಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ಕಟ್ಟೆ ರವಿರಾಜ್ ಆಚಾರ್ಯ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ನಾಗೇಶ್ ಹೆಗ್ಡೆ, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ ರಾಘವೇಂದ್ರ ಕಿಣಿ, ಹಿರಿಯ ವಕೀಲ ಕೆ. ರಾಮಚಂದ್ರ ಅಡಿಗ, ವ್ಯವಸ್ಥಾಪನ ಮಂಡಳಿಯ ಸದಸ್ಯರಾದ ಮಂಜುನಾಥ್ ಹೆಬ್ಬಾರ್ ಉಪಸ್ಥಿತರಿದ್ದರು.
ಕಡಿಯಾಳಿ ಕಾತ್ಯಾಯಿನಿ ಕಲ್ಯಾಣ ಮಂಟಪ ಮಹಿಷಮರ್ಧಿನಿ ದೇವಸ್ಥಾನದ ಸುಪರ್ದಿಗೆ: 50 ವರ್ಷಗಳ ವಿವಾದಕ್ಕೆ ತೆರೆ
Subscribe
Login
0 Comments