ಅಜೆಕಾರು: ಕಳೆದ ಹಲವಾರು ದಿನಗಳಿಂದ ಮನೆಯ ಸಾಕು ಪ್ರಾಣಿಗಳನ್ನು ತಿನ್ನಲು ಹೊಂಚು ಹಾಕುತ್ತಿದ್ದ ಕಾಳಿಂಗ ಸರ್ಪವನ್ನು ಉರಗ ತಜ್ಞ ಅನಿಲ್ ಪ್ರಭು ಕಾರ್ಕಳ ಅವರು ಬುಧವಾರ ತಡರಾತ್ರಿ ಸೆರೆ ಹಿಡಿದ್ದಾರೆ.
ಅಜೆಕಾರು ಚಚ್೯ ಬಳಿಯ ನಿವಾಸಿ ರೋನಾಡ್ ಡಿಸೋಜಾ ಎಂಬುವರ ಮನೆಗೆ ಕಾಳಿಂಗ ಸರ್ಪ ನುಗ್ಗಿದ್ದು, ಅವರ ಮನೆಯ ಸಾಕು ಪ್ರಾಣಿಗಳಾದ ಮೊಲ ಹಾಗೂ ಕೋಳಿ ಯನ್ನು ತಿನ್ನಲು ಹೊಂಚು ಹಾಕಿ ಕುಳಿತ್ತಿತ್ತು. ಈ ಮಾಹಿತಿ ತಿಳಿದ ಅವರು ಉರಗ ತಜ್ಞ ಅನಿಲ್ ಪ್ರಭುಗೆ ಮಾಹಿತಿ ನೀಡಿದ್ದಾರೆ.
ಉರಗ ತಜ್ಞ ಅನಿಲ್ ಪ್ರಭು ಕಾಳಿಂಗ ಸರ್ಪವನ್ನು ಸೆರೆಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ. ಈ ಕಾಳಿಂಗ ಹಾವು 13 ಅಡಿ ಉದ್ದದ 22 ಕೆಜೆ ತೂಕದ ಹೆಣ್ಣು ಕಾಳಿಂಗ ಸರ್ಪ ಆಗಿರುವುದಾಗಿ ನ್ಯೂಸ್ ಪ್ಲಸ್ ಕನ್ನಡಕ್ಕೆ ಅನಿಲ್ ಅವರು ತಿಳಿಸಿದ್ದಾರೆ.