Sunday, June 8, 2025

ಮಾ.31-ಏ10 ಕನ್ನರ್ಪಾಡಿ ಶ್ರೀಜಯದುರ್ಗಾ ಅಮ್ಮನವರ ‘ಅಷ್ಟಬಂಧ ಬ್ರಹ್ಮಕುಂಭಾಭಿಷೇಕ’

ಉಡುಪಿ: ಇತಿಹಾಸ ಪ್ರಸಿದ್ಧ ಕನ್ನರ್ಪಾಡಿ ಶ್ರೀ ಜಯದುರ್ಗಾಪರಮೇಶ್ವರೀ ದೇವಸ್ಥಾನದ ಶ್ರೀಜಯದುರ್ಗಾ ಅಮ್ಮನವರ ಬ್ರಹ್ಮಕುಂಭಾಭಿಷೇಕವು ಮಾ.31ರಿಂದ ಏ.10ರವರೆಗೆ ನಡೆಯಲಿದೆ.

ಕಾರ್ಯಕ್ರಮಗಳ ವಿವರ:

  • ಮಾ.31 ರಂದು ಹೊರೆಕಾಣಿಕೆ ಸಮರ್ಪಣೆ
  • ಏ.2 ರಂದು ಅಷ್ಟಬಂಧ – ಸುಬ್ರಹ್ಮಣ್ಯ ಪ್ರತಿಷ್ಠೆ
  • ಏ.3 ರಂದು ಅಷ್ಟಬಂಧ ಪುರ್ನಪ್ರತಿಷ್ಠೆ ಹಾಗೂ ಸುಬ್ರಹ್ಮಣ್ಯ ಪ್ರತಿಷ್ಠೆ
  • ಏ.4 ರಂದು ಪ್ರಾಯಶ್ಚಿತ್ತ ಹೋಮ
  • ಏ.5 ರಂದು ದುರ್ಗಾ ಹೋಮ
  • ಏ.6 ರಂದು ಬ್ರಹ್ಮಕುಂಭಾಭಿಷೇಕ
  • ಏ.7 ರಂದು ನವಚಂಡಿಯಾಗ
  • ಏ.8 ರಂದು ಕೋಟಿಕುಂಕುಮಾರ್ಚನೆ
  • ಏ.9&10 ರಂದು ರಾಶಿ ಪೂಜೆ

ಪುತ್ತೂರು ವೇದಮೂರ್ತಿ ಶ್ರೀ ಶೀಶ ತಂತ್ರಿಯವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಹಾಗೂ ಶಾಸಕ ಕೆ.ರಘುಪತಿ ಭಟ್‌, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎನ್‌.ಮುರಳೀಧರ್‌ ಬಲ್ಲಾಳ್‌, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷರು ಮತ್ತು ನಿವೃತ್ತ ಪ್ರಧಾನ ಇಂಜಿನಿಯರ್ ಹಾಗೂ ಸರಕಾರದ ಕಾರ್ಯದರ್ಶಿ(ಲೋ.ಇ) ಕರ್ನಾಟಕ ಸರ್ಕಾರದ ಟಿ. ಸುಕುಮಾರ್‌, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರು ಹಾಗೂ ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಕೆ. ಕೃಷ್ಣಮೂರ್ತಿ ಆಚಾರ್ಯ, ಸರದಿ ಅರ್ಚಕ ಗುರುರಾಜ ಉಪಾಧ್ಯಾಯ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ವಕೀಲ ಸಂಜೀವ ಎ, ದೇವಸ್ಥಾನದ ಆಡಳಿತಾಧಿಕಾರಿ ಡಾ| ರೋಶನ್ ಕುಮಾರ್ ಶೆಟ್ಟಿ ಮತ್ತಿತರರು ಭಾಗವಹಿಸಲಿದ್ದಾರೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles