ಕಾರ್ಕಳ : ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯು ನಾಪತ್ತೆಯಾದ ಘಟನೆ
ಕಾರ್ಕಳ ತಾಲೂಕಿನ ಬೆಳ್ಮಣ್ ಸಮೀಪದ ಸರಕಾರಿ ಪದವಿಪೂರ್ವ ಕಾಲೇಜಿನ ಸಮೀಪ ನಡೆದಿದ್ದು,
25 ವರ್ಷದ ಪ್ರಶಾಂತ್ ಕಾಮತ್ ನಾಪತ್ತೆಯಾದ ವ್ಯಕ್ತಿ.
ಪ್ರತಿದಿನವು ಮನೆಯಿಂದ ಬೆಳ್ಮಣ್ ಪೇಟೆಗೆ ಹೋಗಿ ಗೆಳೆಯರೊಂದಿಗೆ ಮಾತನಾಡಿಕೊಂಡು ಮನೆಗೆ
ಹಿಂತಿರುಗಿ ಬರುತ್ತಿದ್ದರು. ಹಿಂದೊಮ್ಮೆ ಮನೆ ಬಿಟ್ಟು ಹೋದವರು 2-3 ದಿನಗಳ ನಂತರ
ಮನೆಗೆ ತಿರುಗಿ ಬಂದಿದ್ದರು. ಇದೇ ರೀತಿ ಜನವರಿ 15 ರಂದು ಮನೆ ಬಿಟ್ಟು ಹೋದವರು ತಿರುಗಿ ಮನೆಗೆ ಬರಬಹುದೆಂದು ಮನೆಯವರೆಲ್ಲ ಭಾವಿಸಿದ್ದರು. ಆದರೆ ಇಂದಿನವರೆಗೂ ಮನೆಗೆ ತಿರುಗಿ ಬಂದಿಲ್ಲ ಎಂದು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.