ಕಾರ್ಕಳ: ಕಾರ್ಕಳ ಉತ್ಸವದ ಪ್ರಯುಕ್ತ ಪೆರ್ವಾಜೆ ಶಾಲೆಯಲ್ಲಿ ಗೂಡು ದೀಪೋತ್ಸವ ಕಾರ್ಯಕ್ರಮವು ಬುಧವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಜ್ರತ ಉಗ್ಗಪ್ಪ ಪರವ, ತುಳು ನಾಡಿನ ಸಂಗತಿಗಳನ್ನು ನೋಡಿ ಅನುಭವಿಸುವ ಮಾನ್ಯತೆ ನೀಡುವ ಕಾರ್ಕಳ ಉತ್ಸವವು ಒಂದು ವಿಶಿಷ್ಟ ಪ್ರಯತ್ನ. ಸಚಿವ ಸುನಿಲ್ ಕುಮಾರ್ ಶಿಶುವಿನಿಂದ ವ್ರದ್ದರವರೆಗೂ ಅವಕಾಶ ಕಲ್ಪಿಸಿದ್ದಾರೆ ಎಂದರು.
ಈ ಸಂದರ್ಭ ಉದ್ಯಮಿ ಮಹಾವೀರ ಹೆಗ್ಡೆ, ಪುರಸಭೆ ಅಧ್ಯಕ್ಷೆ ಸುಮಾ ಕೇಶವ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಅಂಗನವಾಡಿ ಕಾರ್ಯಕರ್ತೆಯರ ಸಂಘದ ತಾ.ಅಧ್ಯಕ್ಷೆ ಪದ್ಮಾವತಿ, ಆಶಾ ಕಾರ್ಯಕರ್ತೆಯರ ಸಂಘದ ತಾ.ಅಧ್ಯಕ್ಷೆ ಶೋಭಾಸತೀಶ ಭಂಡಾರಿ, ಪೆರ್ವಾಜೆ ಶಾಲೆಯ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆ ಶಿಕ್ಷಕಿಯರಾದ ಹರ್ಷಿಣಿ, ಲಕ್ಷ್ಮಿ ಹೆಗ್ಡೆ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಮಂಗಳೂರು ಜಿಲ್ಲೆಯ ಅಧಿಕಾರಿ ರಾಜೇಶ್, ಕಾರ್ಮಿಕ ಇಲಾಖೆ ಅಧಿಕಾರಿ ಪ್ರಸನ್ನಕುಮಾರ ಮತ್ತಿತರು ಉಪಸ್ಥಿತರಿದ್ದರು.


ಈ ವೇಳೆ 126 ಶಾಲೆಗಳ 200ಕ್ಕೂ ಅಧಿಕ ಗೂಡು ದೀಪಗಳು ಪ್ರದರ್ಶನಗೊಂಡವು. ಕಾರ್ಯಕ್ರಮವನ್ನು ಪ್ರಮೀಳಾ ಹರೀಶ್ ಸ್ವಾಗತಿಸಿ, ರಾಮಚಂದ್ರ ಮುನಿಯಾಲು ನಿರೂಪಿಸಿದರು.