ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಅವರು ಚೊಚ್ಚಲ ಬಜೆಟ್ ಅನ್ನು ಇಂದು ಮಂಡಿಸುತ್ತಿದ್ದಾರೆ. ಈ ಬಾರಿಯ ಬಜೆಟ್ ಅನ್ನು ರಾಜ್ಯದ ಅಭಿವೃದ್ಧಿಗೆ ಪಂಚಸೂತ್ರಗಳ ಆಧಾರದಲ್ಲಿ ಮಂಡಿಸುತ್ತಿದ್ದು, 2022-23 ನೇ ಸಾಲಿನ ಬಜೆಟ್ ಗಾತ್ರ 2,65,720 ಕೋಟಿಯಾಗಿದೆ. ಕಳೆದ ಬಾರಿಯ ಬಜೆಟ್ ಅನುದಾನಕ್ಕಿಂತ ಈ ಬಾರಿ ಶೇಕಡಾ 7.7ರಷ್ಟು ಹೆಚ್ಚಳವಾಗಿದೆ.
ಪಂಚಸೂತ್ರಗಳು:
- ಸಮಗ್ರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ
- ದುರ್ಬಲ ವರ್ಗದ ರಕ್ಷಣೆ ಮತ್ತು ಏಳಿಗೆ- ಶಿಕ್ಷಣ, ಉದ್ಯೋಗ, ಆರೋಗ್ಯ, ಸಬಲೀಕರಣ ಕಾರ್ಯಕ್ರಮ
- ಹಿಂದುಳಿದ ಪ್ರದೇಶಗಳ ಅಭಿವೃದ್ಧಿ ಹಾಗೂ ವೈಜ್ಞಾನಿಕವಾಗಿ ಗುರುತಿಸಿ ಅಭಿವೃದ್ಧಿಗೆ ಸಂಘಟಿತ ಕಾರ್ಯಕ್ರಮ
- ಕೃಷಿ, ಕೈಗಾರಿಕೆ, ಸೇವಾವಲಯ ಪಾಲುದಾರಿಕೆ ಜತೆ ಅಭಿವೃದ್ಧಿ
- ನವಭಾರತಕ್ಕಾಗಿ ನವ ಕರ್ನಾಟಕ – ಹೊಸ ಚಿಂತನೆ, ಹೊಸ ಚೈತನ್ಯದ ಜೊತೆ ಹೊಸ ಮುನ್ನೋಟ
ಯಾವ ಇಲಾಖೆಗೆ ಎಷ್ಟು ಅನುದಾನ?
ಆಹಾರ – 2,288 ಕೋಟಿ, ವಸತಿ – 3,594 ಕೋಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ – 4,713 ಕೋಟಿ, ಕೃಷಿ & ತೋಟಗಾರಿಕೆ – 8,457 ಕೋಟಿ, ಸಮಾಜ ಕಲ್ಯಾಣ – 9,389 ಕೋಟಿ, ಲೋಕೋಪಯೋಗಿ – 10,447 ಕೋಟಿ, ಒಳಾಡಳಿತ ಮತ್ತು ಸಾರಿಗೆ – 11,222 ಕೋಟಿ, ಜಲ ಸಂಪನ್ಮೂಲ – 20,601 ಕೋಟಿ, ಶಿಕ್ಷಣ – 31,980 ಕೋಟಿ, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ – 17,325 ಕೋಟಿ, ನಗರಾಭಿವೃದ್ಧಿ – 16,076 ಕೋಟಿ, ಕಂದಾಯ – 16,388 ಕೋಟಿ, ಆರೋಗ್ಯ & ಕುಟುಂಬ ಕಲ್ಯಾಣ – 13,982 ಕೋಟಿ, ಇಂಧನ – 12,655 ಕೋಟಿ ರೂಪಾಯಿ ಅನುದಾನ ನಿಗದಿಪಡಿಸಲಾಗಿದೆ.