ಬೆಳ್ತಂಗಡಿ: ಹರೀಶ್ ಪೂಂಜ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ತಾಲೂಕಿನ ಪೂವಳ – ಕೊಂದಳ ಸಂಪರ್ಕಿಸುವ 1.80ರೂ. ಕೋಟಿ ವೆಚ್ಚದ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮವು ಭಾನುವಾರ ನಡೆಯಿತು. ಊರಿನ ಹಿರಿಯ ಕಾರ್ಯಕರ್ತ ಧರ್ನಪ್ಪ ಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿದರು.
ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ಮಾತನಾಡಿ, ಕಳೆದ 3 ವರ್ಷಗಳಿಂದ ಆರಂಬೋಡಿ ಗ್ರಾ.ಪಂ.ಗೆ ಶಾಸಕರು ಸುಮಾರು ರೂ.15 ಕೋಟಿಗಿಂತಲೂ ಅಧಿಕ ಅನುದಾನವನ್ನು ನೀಡಿದ್ದಾರೆ. ಕೇವಲ ರಸ್ತೆ, ಸೇತುವೆಗೆ ಮಾತ್ರ ಅನುದಾನ ನೀಡದೆ, ಶಿಕ್ಷಣ, ವಿದ್ಯುತ್ ಸಮಸ್ಯೆಗೂ ಹೆಚ್ಚು ಅನುದಾನ ನೀಡಿದ್ದಾರೆ ಎಂದರು.
ಗ್ರಾ.ಪಂ. ಅಧ್ಯಕ್ಷೆ ವಿಜಯ ರಮೇಶ್ ಕುಂಜಾಡಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಗ್ರಾ.ಪಂ. ಸದಸ್ಯ ಸತೀಶ್ ಪಿ. ಮಠ, ಸದಸ್ಯ ಪ್ರಭಾಕರ್ ಹುಲಿಮೇರು, ಶಕ್ತಿ ಕೇಂದ್ರದ ಅಧ್ಯಕ್ಷೆ ಆಶಾ ಎಸ್.ಶೆಟ್ಟಿ, ರೋಟರಿ ಕ್ಲಬ್ ಅಧ್ಯಕ್ಷ ರಾಘವೇಂದ್ರ ಭಟ್, ಗುತ್ತಿಗೆದಾರ ಸುನೀತ್ ಹೆಗ್ಡೆ, ವಕೀಲ ಸುರೇಶ್ ಶೆಟ್ಟಿ, ಯುವ ಉದ್ಯಮಿ ಕಿರಣ್ ಮಂಜಿಲ, ಹಿರಿಯ ಕಾರ್ಯಕರ್ತ ಪಾಂಡುರಂಗ ಶೆಟ್ಟಿಗಾರ್, ರಾಮಾಂಜನೇಯ ಫ್ರೆಂಡ್ಸ್ ಬಳಗ ಹಾಗೂ ಊರಿನ ಸಮಸ್ತರು ಉಪಸ್ಥಿತರಿದ್ದರು.
ಉಮೇಶ್ ಶೆಟ್ಟಿ ಆರಂಬೋಡಿ ಕಾರ್ಯಕ್ರಮ ನಿರೂಪಿಸಿದರು.