ಕುಂದಾಪುರ: ಕೇಂದ್ರ ಸಕಾರದ 180ಕೋಟಿ ರೂ.ವೆಚ್ಚದಲ್ಲಿ ಸಂಗೊಳ್ಳಿ ರಾಯಣ್ಣ 21 ಸೈನಿಕ ಶಾಲೆ ಆರಂಭವಾಗಲಿದ್ದು, ಈಗಾಗಲೇ ಕಟ್ಟಡ ಸಿದ್ದವಾಗಿದೆ. ಇತಿಹಾಸ ಗೊತ್ತಿಲ್ಲದವರು ಸಂಗೊಳ್ಳಿ ರಾಯಣ್ಣ ಹಾಗೂ ಚೆನ್ನಮ್ಮ ಸ್ವತಂತ್ರ್ಯ ಹೋರಟಗಾರರಲ್ಲ ಎನ್ನುದಕ್ಕೆ ಉತ್ತರ ಕೊಡಲಾಗದು ಎಂದು ನಟ ಚೇತನ್ ಹೇಳಿಕೆಗೆ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿರುಗೇಟು ನೀಡಿದರು.
ಕುಂದಾಪುರ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಕುಂದಾಪುರ ಉಪವಿಭಾಗಾಧಿಕಾರಿ, ತಹಸೀಲ್ದಾರ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಜೊತೆ ಸಭೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಇತಿಹಾಸ, ನಮಗೆ ಗೊತ್ತಿರುವ ಸತ್ಯಾಂಷಗಳ ಮೇಲೆ, ನಾವು ನಂಬಿರುವ ದಾಖಲೆಗಳ ಅಧಾರದಲ್ಲಿ ರಾಯಣ್ಣ ಹಾಗೂ ಚೆನ್ನಮ್ಮ ಬಗ್ಗೆ ಪರಿಪೂರ್ಣ ಗೌರವ ಹೊಂದಿದ್ದೇವೆ ಎಂದರು.
200 ಕೋಟಿ ಹಣ ಬಿಡುಗಡೆ
ರಾಜ್ಯದಲ್ಲಿರುವ 800 ಹಿಂದುಳಿದ ವರ್ಗಗಳ ಸಮುದಾಯ ಭವನಕ್ಕೆ ಹಣಕಾಸಿನ ಸಮಸ್ಯೆ ಇದ್ದು, ಕರೋನಾ ಸಮಯದಲ್ಲಿ ಅತಿರೇಕಕ್ಕೆ ಹೋಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 200 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. 122.50 ಕೋಟಿ 800 ಸಮುದಾಯ ಭವನ ಖಾತೆಗೆ ಜಮಾ ಮಾಡಲಾಗಿದೆ. ಸಮುದಾಯ ಭವನಗಳ ಅನುದಾನ ಕಳೆದ ಆರೇಳು ವರ್ಷದಿಂದ ಬಾಕಿಯಿದ್ದು, ಅನುದಾನದ ಆಸೆ ಬಿಟ್ಟಿದ್ದು, ಅನುದಾನ ಬಿಡುಗಡೆ ಸಮಾಧಾನ ತಂದಿದೆ ಎಂದು ಹೇಳಿದರು.
ಉಡುಪಿ ಜಿಲ್ಲೆಯ 32 ಎಲ್ಲಾ ವರ್ಗದ ಸಮುದಾಯ ಭವನಗಳಿಗೆ 6.74 ಕೋಟಿ ಏಕಲಾದಲ್ಲಿ ಬಿಡುಗಡೆ ಮಾಡಲಾಗಿದೆ. ಹಿಂದುಳಿದ ವರ್ಗಗಳ ಸಮಸ್ಯೆಗಳು ಸ್ವಲ್ಪಮಟ್ಟಿಗೆ ಪರಿಹಾರ ಆಗುತ್ತಿದ್ದು, ಸೃಜನಾತ್ಮಕ ಬೆಳವಣಿಗೆ ಆಗಿದೆ. ಶಂಕರನಾರಾಯಣ ಮತ್ತು ಸಿದ್ದಾಪುರ ವಸತಿ ಶಾಲೆಯಲ್ಲಿ ಸ್ಥಳಾವಕಾಶ ಗೊಂದಲದಿಂದ ಹಿನ್ನೆಡೆಯಾಗಿದ್ದು, ಪೂರ್ಣ ಪ್ರಮಾಣದಲ್ಲಿ ಸಮಸ್ಯೆ ಪರಿಹಾರವಾಗಿ ಇನ್ನೊಂದು ವಾರದಲ್ಲಿ ಶಿಲಾನ್ಯಾಸ ಕಾರ್ಯ ನಡೆಯಲಿದೆ. ಕುಂದಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಮೂರು ವಸತಿ ಶಾಲೆ ಆರಂಭಿಸಲಾಗುತ್ತದೆ ಎಂದರು.
29 ಕೋಟಿ ವೆಚ್ಚದಲ್ಲಿ ನಾರಾಯಣಗುರು ಹೆಸರಲ್ಲಿ ರಾಜ್ಯದಲ್ಲಿ ನಾಲ್ಕು ವಸತಿ ಶಾಲೆಗೆ ಬಜಟ್ನಲ್ಲಿ ಘೋಶಿಸಿದ್ದು, ಅದರಲ್ಲಿ ಒಂದು ಶಾಲೆ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅಪೇಕ್ಷೆಯಂತೆ ಕುಂದಾಪುರ ಮಂಜೂರು ಮಾಡಲು ನಿರ್ಧರಿಸಲಾಗಿದೆ. ಹಿಂದುಳಿದ ವರ್ಗಕ್ಕೆ ಸಂಬಂಧಿಸಿ ಕರೋನಾ ಹಿನ್ನೆಲೆಯಲ್ಲಿ ನಿಲುಗಡೆಯಾಗಿತ್ತೋ ಅದಲ್ಲವನ್ನೂ ಪುನಹಾ ಆರಂಭಿಸಲಾಗುತ್ತದೆ ಎಂದು ಹೇಳಿದರು.