ಕಾರ್ಕಳ: ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ದಿ. ನರಸಿಂಹ ನಾಯಕ್ ಅವರ ಪುತ್ರ ಕನ್ಯಾನ ಹಾಲು ಉತ್ಪಾದಕ ಸಹಕಾರಿ ಸಂಘದ ಅಧ್ಯಕ್ಷ ಲಕ್ಷೀ ನಾರಾಯಣ್ ನಾಯಕ್ ಅವರು ಸುನೀಲ್ ಕುಮಾರ್ ಅವರ ವಿಕಾಸ ಕಛೇರಿಯಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಸುನೀಲ್ ಕುಮಾರ್ ಬಿಜೆಪಿ ಪಕ್ಷದ ಧ್ವಜ ನೀಡಿ ಸ್ವಾಗತಿಸಿದರು. ಸಭೆಯಲ್ಲಿ ಬಿಜೆಪಿ ಮುಖಂಡ ಪ್ರತಾಪ್ ಸಿಂಹ ನಾಯಕ್, ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಗುರುದಾಸ್ ಶೆಣೈ ಹೆಬ್ರಿ, ದಿನೇಶ್ ಪೈ, ನವೀನ್ ನಾಯಕ್ , ಮೊದಲಾದವರು ಉಪಸ್ಥಿತರಿದ್ದರು.