ಉಡುಪಿ: ಪರ್ಯಾಯ ಶ್ರೀಅದಮಾರು ಮಠದ ಆಶ್ರಯದಲ್ಲಿ ಶ್ರೀಕೃಷ್ಣಮಠದ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ “ಆಧ್ಯಾತ್ಮಿಕತೆಯನ್ನು ಸಂಯೋಜಿಸುವುದು, ವೃತ್ತಿಪರ, ವೈಯಕ್ತಿಕ ಜೀವನ” ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು. ನಿರಂತರ ಜ್ಞಾನಯಜ್ಞದ ಅಂಗವಾಗಿ, ವಿಶೇಷ ಪ್ರವಚನ ಮಾಲಿಕೆಯಲ್ಲಿ, ಬೆಂಗಳೂರಿನ ಸುಂದರ್ ಅವರು ಉಪನ್ಯಾಸ ಕಾರ್ಯಕ್ರಮ ನೀಡಿದರು.