ಉಡುಪಿ: ಮೊಬೈಲ್ ಪ್ರಭಾವದಿಂದಾಗಿ ಇಂದು ಪುಸ್ತಕ ಓದುವ ಹವ್ಯಾಸ ಕಡಿಮೆ ಆಗಿದೆ. ಸಂವಹನದ ಉದ್ದೇಶದಿಂದ ಬಂದಿರುವ ಮೊಬೈಲ್ ದುರುದ್ದೇಶಗಳಿಗೆ ಬಳಕೆಯಾಗುತ್ತಿದೆ. ಸಾಮಾಜಿಕ ಮಾಧ್ಯಮಗಳು ಮಾದ್’ಯಮ’ ಗಳಾಗಿವೆ ಎಂದು ಹಾಸ್ಯ ಸಾಹಿತಿ ದುಂಡಿರಾಜ್ ಹೇಳಿದರು.
ಅವರು ಉಡುಪಿಯ ಸುಹಾಸಂ ವತಿಯಿಂದ ಉಡುಪಿ ಕಿದಿಯೂರು ಹೊಟೇಲಿನಲ್ಲಿ ಭಾನುವಾರ ನಡೆದ ಹಾಸ್ಯೋಲ್ಲಾಸ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭ ಮುಖ್ಯ ಅತಿಥಿಯಾಗಿ ಹಾಸ್ಯ ಭಾಷಣಕಾರ ವೈ ವಿ ಗುಂಡೂರಾವ್, ನ್ಯಾಯವಾದಿ ಎಸ್.ಸಂತೋಷ್ ಹೆಬ್ಬಾರ್, ಲೇಖಕಿ ಜಯಲಕ್ಷ್ಮಿ ಉಪಸ್ಥಿತರಿದ್ದರು.
ಸುಹಾಸಂ ಅಧ್ಯಕ್ಷ ಎಚ್ ಶಾಂತರಾಜ ಐತಾಳ್ ಸ್ವಾಗತಿಸಿ, ಸಾಹಿತಿ ಡಾಕ್ಟರ್ ಎನ್ ವಿ ಕಾಮತ್ ಪ್ರಾಸ್ತಾವಿಕ ಮಾತನಾಡಿದರು. ಶ್ರೀನಿವಾಸ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು.
ಈ ವೇಳೆ ಸುವರ್ಣ ಸಂಗ್ರಹ ಉಭಯಕುಶಲೋಪರಿ ಸೇರಿದಂತೆ ಒಟ್ಟು 4ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.