Sunday, June 8, 2025

ಸರ್ಕಾರ ಮುಂದೆ ಭಾರತದಲ್ಲೇ ನಮಗೆ ಒಂದು ವ್ಯವಸ್ಥೆ ಮಾಡಲಿ : ವಿದ್ಯಾರ್ಥಿನಿ ಹೀನಾ ಫಾತಿಮಾ

ಮಂಗಳೂರು: ಸರ್ಕಾರ ಮುಂದೆ ಭಾರತದಲ್ಲೇ ನಮಗೆ ಒಂದು ವ್ಯವಸ್ಥೆ ಮಾಡಲಿ. ಉಕ್ರೇನ್‌ನಿಂದ ಬಂದವರಿಗೆ ಒಂದು ಸಂಸ್ಥೆ ಮಾಡಿ ಶಿಕ್ಷಣಕ್ಕೆ ‌ನೆರವಾಗಲಿ. ಇಲ್ಲವಾದರೆ ಅಲ್ಲೇ ಭವಿಷ್ಯದಲ್ಲಿ ನಮಗೆ ಪರ್ಯಾಯ ವ್ಯವಸ್ಥೆ ಮಾಡಿದರೆ ಉತ್ತಮ ಎಂದು ವಿದ್ಯಾರ್ಥಿನಿ ಹೀನಾ ಫಾತಿಮಾ ತಿಳಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಉಜಿರೆಯ ನಿವಾಸಿ ಹೀನಾ ಫಾತಿಮಾ ಉಕ್ರೇನ್‌ನ ಖಾರ್ಕೀವ್‌ನಲ್ಲಿ ದ್ವಿತೀಯ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ. ಅವರು ಬೆಂಗಳೂರಿನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಭಾನುವಾರ ಆಗಮಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ವಿದ್ಯಾರ್ಥಿನಿ ಹೀನಾ ನಾವು ಖಾರ್ಕೀವ್‌ನಿಂದ ರೈಲಿನಲ್ಲಿ 24 ಗಂಟೆ ಪ್ರಯಾಣಿಸಿ ಗಡಿ ಭಾಗ ತಲುಪಿದೆವು. ಭಾರತೀಯ ರಾಯಭಾರಿ ಕಚೇರಿ ನಮಗೆ ಮೊದಲೇ ಸ್ಥಳಾಂತರಕ್ಕೆ ಸೂಚಿಸಿತ್ತು. ಆದರೆ ಕಾಲೇಜಿನವರು ಇದ್ದವರಿಗೆ ಆಫ್ ಲೈನ್, ಹೋದವರಿಗೆ ಆನ್ ಲೈನ್ ಕ್ಲಾಸ್ ಮಾಡ್ತೀವಿ ಅಂದಿದ್ರು. ಹೀಗಾಗಿ ‌ನಾವು ವಾರ್ ಆಗಲ್ಲ ಅಂತ ಅಲ್ಲೇ ಉಳಿದೆವು ಎಂದರು.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles