ತೊಕ್ಕಟ್ಟು: ಈರುಳ್ಳಿ ತುಂಬಿದ ಲಾರಿ ಪಲ್ಟಿಯಾಗಿ ಲಾರಿ ಚಾಲಕ ಸೇರಿ ಇಬ್ಬರು ಗಾಯಗೊಂಡಿರುವ ಘಟನೆ ತೊಕ್ಕೊಟ್ಟುವಿನ ಕಾಪಿಕಾಡ್ ನಲ್ಲಿ ನಡೆದಿದೆ. ಗಾಯಾಳುಗಳನ್ನು ತೊಕ್ಕಟ್ಟು ನೇತಾಜಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಹಾರಾಷ್ಟ್ರ ನೋಂದಾವಣಿಯ ಲಾರಿ, ಕೇರಳದ ಕಡೆಗೆ ಸಾಗುತ್ತಿರುವ ವೇಳೆ ಪಲ್ಟಿಯಾಗಿದೆ. ವಿದ್ಯುತ್ ಟ್ರಾನ್ಸ್ ಫಾರ್ಮರ್ ಪಕ್ಕವೇ ಲಾರಿ ಬಿದ್ದಿದ್ದು, ಒಂದು ವೇಳೆ ಲಾರಿ ಟ್ರಾನ್ಸ್ ಪಾರ್ಫರ್ ಗೆ ತಗುಲಿದ್ದರೆ ಅಪಾರ ಜೀವ ನಷ್ಟ ಆಗುವ ಸಂಭವವಿತ್ತು. ಅದೃಷ್ಟವಶಾತ್ ಸಂಭವಿಸಬೇಕಿದ್ದ ಭಾರೀ ಅನಾಹುತ ತಪ್ಪಿದಂತಾಗಿದೆ. ಇನ್ನು, ಇದೇ ವೇಳೆ ಕುಂಪಲ ಬೈಪಾಸ್ ನಿಂದ ಎದುರುಮುಖವಾಗಿ ಬರುವ ಎರಡು ದ್ವಿಚಕ್ರ ವಾಹನ ಸವಾರರು ಕೂಡ ಪಾವಡದಸೃದಶವಾಗಿ ಪಾರಾಗಿದ್ದಾರೆ.