Thursday, June 19, 2025

ಮನಸ್ಸು ಕೆಡಿಸೋ ಕೋಮುವಾದ ಬೇಡ, ಪ್ರೀತಿ ಸಾಮರಸ್ಯವೇ ಬದುಕಿಗೆ ಸ್ಪೂರ್ತಿಯಾಗಲಿ:

ಮ್ಮದು ಜ್ಯಾತ್ಯಾತೀತ ದೇಶ ಇಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಬಾಂಧವರು ಪ್ರೀತಿ ಸೌಹಾರ್ದತೆಯಿಂದ ಬಾಳುತ್ತಿದ್ದರು. ಒಂದು ಕಾಲವಿತ್ತು. ಅದು ನನ್ನ ಬಾಲ್ಯ ಕಾಲ. ಅಲ್ಲಿ ಜಾತಿ ಭೇದವಿರಲಿಲ್ಲ. ಮೇಲು ಕೀಳು ಭಾವನೇ ಇಲ್ಲ. ಎಲ್ಲರೂ ಒಂದೇ. ಎಲ್ಲರೂ ಪರಸ್ಪರ ಪ್ರೀತಿಯಿಂದ ಒಬ್ಬರಿಗೊಬ್ಬರು ಸಾತ್ ಕೊಟ್ಟು ಬಾಳುತ್ತಿದ್ದರು. ಕೋಮುವಾದಿಗಳು ಕೋಮುವಾದ ಗಲಭೆ ಮಾಡಲು ಪ್ರಯತ್ನಿಸಿದಾಗ್ಲೂ ಜಾತಿ ಬೇಧಭಾವವಿಲ್ಲದೆ ಎಲ್ಲರೂ ಧೈರ್ಯದಿಂದ ಜೊತೆಯಾಗಿ ಎದುರಿಸುತ್ತಿದ್ದೆವು. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸಹೋದರರು ಸೇರಿ ನಮಗೆ ರಕ್ಷಣೆ ನೀಡುತ್ತಿದ್ದರು. ಆ ಸಮಯದಲ್ಲಿ ಆ ನನ್ನ ಪುಟ್ಟ ಮನಸ್ಸಲ್ಲೂ ಹೊಂದಾಣಿಕೆ ಪ್ರೀತಿಯ ಭಾವನೆ ಮೂಡಿಬರುತ್ತಿತ್ತು.

ಆದರೆ ಈಗ ಕಾಲ ಕಳೆದಂತೆ ಎಲ್ಲಾ ಧರ್ಮದಲ್ಲೂ ಹಲವು ಸಂಘಟನೆಗಳು ಪ್ರಾರಂಭವಾದವು. ಈ ಸಂಘಟನೆಗಳು ಸಮಾಜದಲ್ಲಿ ಉತ್ತಮ ಕೆಲಸಗಳನ್ನು ಮಾಡುತ್ತಿವೆ. ಆದರೆ ಕೆಲವು ನೀಚ ಮನಸ್ಸಿನ ವ್ಯಕ್ತಿಗಳು ಸಮಾಜದಲ್ಲಿ ಜಾತಿ ಭೇಧದ ವಿಷ ಬೀಜ ಬಿತ್ತುತ್ತಿದ್ದಾರೆ. ಹೊಂದಾಣಿಕೆಯಿಂದ ಬಾಳುತ್ತಿರುವ ಜನರ ಮಧ್ಯೆ ಜಗಳಕ್ಕೆ ಕಾರಣಗಳನ್ನು ಹುಡುಕುವ ಕೆಲಸವನ್ನು ಮಾಡುತ್ತಿದ್ದಾರೆ. ಯಾಕೆ ಈ ಸಮಸ್ಯೆಗಳನ್ನು ರಚಿಸುತ್ತಿದ್ದೀರಾ? ಅದರಲ್ಲಿ ಏನು ಪ್ರಯೋಜನವಿದೆ? ಹಿಂದೂ ಆಗಲಿ, ಮುಸ್ಲಿಂ ಆಗಲಿ ಕ್ರಿಶ್ಚಿಯನ್ ಆಗಲಿ, ನಮ್ಮ ಶರೀರದಲ್ಲಿ ಓಡುತ್ತಿರುವ ರಕ್ತದ ಬಣ್ಣ ಒಂದೇ. ಉಸಿರಾಡುವ ಗಾಳಿ ಒಂದೇ. ಒಂದೇ ಸಮಾಜದಲ್ಲಿ ನಾವೆಲ್ಲರೂ ಬದುಕುತ್ತಿದ್ದೇವೆ ಮತ್ಯಾಕೆ ಈ ಜಾತಿ ಭೇದ?

ಮಾನವೀಯತೆಯ ಮುಂದೆ ಎಲ್ಲರೂ ಒಂದೇ:


ನಮಗೆ ಒಂದು ಕಷ್ಟ ಬಂದಾಗ ಸಹಾಯಕ್ಕೆ ಬರುವವರನ್ನು ಯಾವ ಜಾತಿಯಂಥ ನಾವು ನೋಡಲ್ಲ. ಪ್ರವಾಹ ಬಂದಾಗ್ಲೂ ಸಾಂಕ್ರಾಮಿಕ ರೋಗಗಳು ಬಂದು ದಿನ ದಿನ ಮನುಷ್ಯ ಸಾಯುವಾಗ ದೇಶವನ್ನು ನಮ್ಮನ್ನು ರಕ್ಷಿಸುವವರು ಮನುಷ್ಯರೇ. ಅವರಲ್ಲಿ ಹಿಂದೂ ಯಾರು ಮುಸಲ್ಮಾನ ಯಾರು, ಕ್ರಿಶ್ಚಿಯನ್ ಯಾರು, ಅಂತ ಯಾರು ನೋಡಲ್ಲ.


ಭಾರತದಲ್ಲಿ ಕೊರೊನಾ ಹರಡಿ ಆಕ್ಸಿಜನ್ ಸಮಸ್ಯೆ ಬಂದಾಗ ಇಸ್ಲಾಂ ರಾಷ್ಟ್ರಗಳು ಆಕ್ಸಿಜಾನ್ ಕೊಟ್ಟರು. ಅವರು ಅದು ಹಿಂದೂ ರಾಷ್ಟ್ರ ಎಂದು ನೋಡಿಲ್ಲ. ಅಲ್ಲಿ ಕಷ್ಟ ಪಡುವ ಮನುಷ್ಯರನ್ನಷ್ಟೇ ನೋಡಿದರು. ಅದೆ ತರ ಕೊರೊನಾದಿಂದ ಭೀಕರ ಪರಿಸ್ಥಿಯಲ್ಲಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳಲ್ಲಿ ಮುಸ್ಲೀಮರು ಇರುವರು. ಅವರನ್ನು ಚಿಕಿತ್ಸೆ ಮಾಡುವ ವೈದ್ಯರು ಹಿಂದೂಗಳಾಗಿರಬಹುದು. ಹಾಗಂತ ಈತ ಮುಸ್ಲಿಂ ನಾನು ಚಿಕಿತ್ಸೆ ನೀಡಲ್ಲ ಎಂದು ಯಾವ ವೈದ್ಯನೂ ಹೇಳಲಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ವೈದ್ಯರು ಹಿಂದೂಗಳು ಮುಸ್ಲಿಮರು ಇರುತ್ತಾರೆ. ಅವರು ಪ್ರತ್ಯೇಕವಾಗಿ ನಾನು ಹಿಂದೂ ರೋಗಿಗೆ ಚಿಕಿತ್ಸೆ ನೀಡುವೆ. ಅಥವಾ ನಾನು ಮುಸ್ಲಿಂ ರೋಗಿಗೆ ಅಷ್ಟೇ ಚಿಕಿತ್ಸೆ ನೀಡುವೆ ಅಂದಿಲ್ಲ. ತಮ್ಮ ಆಸ್ಪತ್ರೆ ಗೆ ಬರುವವರೆಲ್ಲಾ ಮನುಷ್ಯರು. ಅವರನ್ನು ರಕ್ಷಿಸಬೇಕು ಎನ್ನುವ ಮನೋಭಾವನೆಯಿಂದ ಚಿಕಿತ್ಸೆ ನೀಡುತ್ತಾರೆ.

ಒಂದು ಪ್ರವಾಹ ಬಂದು ನಮ್ಮ ನಾಡು ನೀರಲ್ಲಿ ಮುಳುಗುವಾಗಲೂ ನಮಗೆ ಸಹಾಯ ಹಸ್ತ ನೀಡುವ ಸೈನಿಕರು ಹಿಂದೂ ಮುಸ್ಲಿಂ ಅನ್ನೋದನ್ನ ನೋಡದೆ ಎಲ್ಲರನ್ನು ರಕ್ಷಿಸುವ ಕೆಲಸ ಮಾಡುತ್ತಾರೆ.ಅನ್ಯೋನ್ಯತೆಯಿಂದ ನಮ್ಮ ನಾಡಲ್ಲಿ ಜನರು ಬದುಕೋದು ನೋಡೋಕ್ಕೆ ಆಗದ ಕೆಲವು ಕಿಡಿಗೇಡಿಗಳಿದ್ದಾರೆ. ಇವತ್ತಿದ್ದವ ನಾಳೆ ಇದ್ದಾನೋ ಇಲ್ಲವೋ ಗೊತ್ತಿಲ್ಲ. ಅಂತಹ ಪರಿಸ್ಥಿತಿಗೆ ನಮ್ಮ ಜಗತ್ತು ಹೋಗ್ತಾ ಇದೆ.

ಸಹಬಾಳ್ವೆಯೇ ಬದುಕಿನ ದಾರಿಯಾಗಲಿ:

ಸಾವು ಅನ್ನೋದು ನಮ್ಮ ಬೆನ್ನ ಹಿಂದೆಯೇ ಇದೆ. ಹಾಗಾಗಿ ಇರುವಷ್ಟು ಕಾಲ ಎಲ್ಲರೂ ಪ್ರೀತಿ ಸಹಬಾಳ್ವೆಯಿಂದ ಬದುಕುವ. ಕೊರೊನಾ ವೇಳೆಯಲ್ಲೇ ಹಸಿದು ಕಂಗಾಲಾದ ಜನರಿಗೆ ಹಿಂದೂ ಮುಸ್ಲಿಂ ಹಾಗೆ ಜಾತಿ ಭೇಧವಿಲ್ಲದೆ ಎಲ್ಲಾ ಸಂಘಟನೆಗಳು ಕೂಡಾ ಕಷ್ಟದಲ್ಲಿರುವ ಎಲ್ಲರಿಗೂ ಆಹಾರ ವಿತರಿಸುತ್ತಿದ್ದರು. ಆ ಪ್ರೀತಿ ನಮ್ಮಲ್ಲಿ ಎಂದೂ ಇರಬೇಕು. ಯಾವುದಕ್ಕೂ ಜಾತಿಯನ್ನು ಮಧ್ಯೆ ತರಬಾರದು. ಸಮಾಜದಲ್ಲಿ ನಾವೆಲ್ಲರೂ ಒಂದೇ. ಈಗಿನ ಯುವ ವಿದ್ಯರ‍್ಥಿಗಳಿಗೂ ಒಂದು ಮಾತು ಹೇಳೋದಿದೆ. ಈಗಿನ ವಿದ್ಯಾರ್ಥಿಗಳು ಮುಂದಿನ ಸಮಾಜವನ್ನು ಕಟ್ಟುವ ಯುವ ಸಮೂಹವಾಗಿದೆ. ಹಾಗಾಗಿ ನಿಮ್ಮಲ್ಲಿಯೂ ಜಾತಿಭೇದ ಬೇಡ. ಶಿಕ್ಷಣ ಸಂಸ್ಥೆಯಲ್ಲಿ ಯಾವ ಜಾತಿವಾದವನ್ನು ತರದಿರಿ. ಅಲ್ಲಿ ಎಲ್ಲಾ ವಿದ್ಯಾರ್ಥಿಗಳು ಒಂದೇ.

ಎಲ್ಲರೂ ಅವರವರ ರ‍್ಮವನ್ನು, ನಂಬಿಕೆಯನ್ನು ಅನುಸರಿಸಲಿ. ಆದರೆ ಅದು ಸಮಾಜವನ್ನು ಹಾಳು ಮಾಡಬಾರದು. ಕ್ರಿಸ್ಮಸ್ ಆಗಲಿ, ದೀಪಾವಳಿಯಾಗಲಿ ರಮ್ಝಾನ್ ಆಗಲಿ ನಾವೆಲ್ಲರೂ ಜೊತೆಯಾಗಿ ಆಚರಿಸುವ. ಜೊತೆಯಾಗಿ ಬಾಳುವ.

ಮೈಮುನಾ ಅಸ್ಲಂ

ನ್ಯೂಸ್ ಪ್ಲಸ್ ಕನ್ನಡ

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest


0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles