ಮಂಗಳೂರು: ಮಂಗಳೂರಿನ ಕ್ಯಾಥೋಲಿಕ್ ಸಭೆಯ ರಜತ ಮಹೋತ್ಸವ ಕಾರ್ಯಕ್ರಮವು ಮಂಗಳೂರಿನ ಬೆಂದೂರಿನ ಮೊನ್ಸಿ. ಲೆಸ್ಲಿ ಶೆಣಯ್ ಸಮುದಾಯ ಭವನದಲ್ಲಿ ಮಂಗಳವಾರ ನಡೆಯಿತು.
ಕಾರ್ಯಕ್ರಮವನ್ನು ಕ್ಯಾಥೋಲಿಕ್ ಸಭೆಯ ನಿರ್ದೇಶಕ ರೆ.ಫಾ. ವಾಲ್ಟರ್ ಡಿ’ಮೇಲ್ಲೋ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಕ್ಯಾಥೋಲಿಕ್ ಸಭಾದ ಕೇಂದ್ರೀಯ ಅಧ್ಯಕ್ಷ ಸ್ಟೇನಿ ಲೋಬೊ ಉಪಸ್ಥಿತರಿದ್ದರು. ಹಾಗೂ ಕಿಶೋರ್ ಫೆರ್ನಾಂಡಿಸ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಬೆಂದೂರು ಘಟಕದ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ರೊನಾಲ್ಡ್ ವಾಲ್ಡರ್ ಮಂಡಿಸಿದರು. ಕಾರ್ಯಕ್ರಮದಲ್ಲಿ ಸದಸ್ಯರು, ಹುದ್ದೆದಾರರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.