ಉಡುಪಿ: ಕನ್ನಡ ಜಾನಪದ ಪರಿಷತ್ ಕರಾವಳಿ ವಿಭಾಗೀಯ ಘಟಕವು ಕುಂದಾಪುರ ಲಯನ್ಸ್ ಕ್ಲಬ್ ಕೋಸ್ಟಲ್ನ ಸಹಕಾರದೊಂದಿಗೆ ‘ರಾಜ್ಯಮಟ್ಟದ ಜಲಜಾನಪದೋತ್ಸವ-2022’ ಮರವಂತೆಯ ಸಮುದ್ರ ಕಿನಾರೆಯಲ್ಲಿ ಮಾ.20ರ ಬೆಳಿಗ್ಗೆ 8ರಿಂದ ರಾತ್ರಿ 9ರವರೆಗೆ ನಡೆಯಲಿದೆ.
ಈ ಕುರಿತು ಉಡುಪಿಯಲ್ಲಿ ಬುಧವಾರ ನಡೆದ ಸುದ್ದಿಘೋಷ್ಠಿಯಲ್ಲಿ ಮಾತನಾಡಿದ ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಎಸ್.ಬಾಲಾಜಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದು, ಗ್ರಾ.ಪಂ.ಅಧ್ಯಕ್ಷೆ ರುಕ್ಮಿಣಿ ರಾಷ್ಟ್ರಧ್ವಜಾರೋಹಣ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಎಸ್.ಬಾಲಾಜಿ ವಹಿಸಲಿದ್ದು, ವಿವಿಧ ವಸ್ತು ಪ್ರದರ್ಶನಗಳನ್ನು ಸಚಿವ ಸುನಿಲ್ ಕುಮಾರ್, ಶಿವಮೊಗ್ಗ ಕ್ಷೇತ್ರದ ಸಂಸದ ರಾಘವೇಂದ್ರ, ಸ್ಥಳೀಯ ಶಾಸಕ ಸುಕುಮಾರ್ ಶೆಟ್ಟಿ ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಜನಪದ ಕಲಾ ಪ್ರದರ್ಶನ, ಕೊಂಕಣ ಖಾರ್ವಿ ಜನಸಮುದಾಯದ ಗುಮಟೆ ನೃತ್ಯ ಕೋಲಾಟ, ಮರವಂತೆಯ ಕೊರಗತನಿಯ ಕಲಾತಂಡದ ಸಾಂಸ್ಕೃತಿಕ ವೈಭವದ ಪ್ರದರ್ಶನ ನಡೆಯಲಿದೆ ಎಂದು ಪರಿಷತ್ತಿನ ಕರಾವಳಿ ವಿಭಾಗೀಯ ಸಂಚಾಲಕಿ ಡಾ ಭಾರತಿ ಮರವಂತೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದ.ಕ.ಜಿಲ್ಲಾಧ್ಯಕ್ಷ ಡಾ ಪ್ರಶಾಂತ್ ಕುಮಾರ್, ಉ.ಕ. ಜಿಲ್ಲಾಧ್ಯಕ್ಷ ಡಾ.ಪ್ರಕಾಶ್ ನಾಯಕ್, ಕಾರ್ಯಕಾರಿ ಸಮಿತಿಯ ರವಿ ಮಡಿವಾಳ ಮರವಂತೆ, ದಯಾನಂದ ಬಳೆಗಾರ್ ಉಪಸ್ಥಿತರಿದ್ದರು.
ಮಾ.20: ಮರವಂತೆಯ ಸಮುದ್ರ ಕಿನಾರೆಯಲ್ಲಿ ‘ರಾಜ್ಯಮಟ್ಟದ ಜಲಜಾನಪದೋತ್ಸವ – 2022’
Subscribe
Login
0 Comments