ಕೊಲ್ಲೂರು: ಮಾ.25ರಂದು ಜರುಗಲಿರುವ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಜಾತ್ರೆಯಲ್ಲಿ ಅನ್ಯಮತೀಯರಿಗೆ ವ್ಯಾಪಾರಕ್ಕೆ ಅವಕಾಶ ನೀಡದಂತೆ ವಿ.ಹಿಂ.ಪ ಬಜರಂಗದಳ ವತಿಯಿಂದ ಗ್ರಾ.ಪಂ. ಗೆ ಮನವಿ ಮಾಡಲಾಯಿತು.
ಜಾತ್ರೆಯಲ್ಲಿ ಯುವತಿಯರನ್ನು ಪುಸಲಾಯಿಸಿ ಅವರಿಂದ ಫೋನ್ ನಂಬರ್ ಪಡೆದು ಬಳಿಕ ಲವ್ ಜಿಹಾದ್ ಮಾಡಲಾಗುತ್ತೆ. ಬೈಂದೂರು ವ್ಯಾಪ್ತಿಯಲ್ಲಿ ಇಂತ ಘಟನೆಗಳಾದ ಮಾಹಿತಿಯಿದೆ ಎಂದು ಸಂಘಟನೆ ಆರೋಪಿಸಿದೆ.
ವಿ.ಹಿಂ.ಪ. ಬೈಂದೂರು ತಾಲೂಕು ಅಧ್ಯಕ್ಷ ಜಗದೀಶ್ ಕೊಲ್ಲೂರು ಯಾವುದೇ ಕಾರಣಕ್ಕೂ ಅನ್ಯಕೋಮಿನವರಿಗೆ ಅಂಗಡಿ ತೆರೆಯಲು ಅವಕಾಶ ನೀಡದಿರಲು ಆಗ್ರಹಿಸಿ ಕೊಲ್ಲೂರು ಗ್ರಾ.ಪಂ. ಉಪಾಧ್ಯಕ್ಷ ಹರೀಶ್ ಶೆಟ್ಟಿಯವರಿಗೆ ಮನವಿ ಸಲ್ಲಿಸಿದ್ದಾರೆ.