Sunday, June 8, 2025

ಕರಾವಳಿ ಜಿಲ್ಲಾಡಳಿತಗಳಿಗೆ ದನ ಕಳವು ಪ್ರಕರಣ ಕಡಿಮೆ ಮಾಡಲು ಸಮಿತಿ ರಚನೆಗೆ ಸೂಚನೆ ನೀಡಿದ ಸಚಿವ ಪ್ರಭು ಚವ್ಹಾಣ್

ಉಡುಪಿ: ಕರಾವಳಿ ಜಿಲ್ಲೆಗಳಲ್ಲಿ ನಿರಂತರವಾಗಿ ದನ ಕಳವು ಆಗುತ್ತಿದ್ದು, ಹಾಗೂ ಮುಂಬರುವ ದಿನಗಳಲ್ಲಿ ಇಂತಹ ಪ್ರಕರಣಗಳು ದಾಖಲಾಗದಂತೆ ಕ್ರಮ ತೆಗೆದುಕೊಳ್ಳಲು ಗೋ ರಕ್ಷಣಾ ಸಮಿತಿಯನ್ನು ರಚನೆ ಮಾಡಬೇಕೆಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅವರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ ಪಿ ಗಳಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ.

ಕಾರಾವಳಿಯಲ್ಲಿ ಹೆಚ್ಚುತ್ತಿರುವ ದನ ಕಳವಿನ ಕುರಿತು ಮಾದ್ಯಮಗಳಲ್ಲಿ ವರದಿಗಳನ್ನು ನೋಡಿದ್ದೇನೆ. ಈ ಕುರಿತು ಕ್ರಮ ತೆಗೆದುಕೊಳ್ಳಲು ಆಯಾ ಜಿಲ್ಲಾಧಿಕಾರಿಗಳು ಹಾಗೂ ಎಸ್ ಪಿ ಗಳು ಗೋ ರಕ್ಷಣಾ ಸಮಿತಿಯನ್ನು ರಚಿಸಿ, ಅಕ್ರಮವಾಗಿ ಗೋ ಗಳನ್ನು ಸಾಗಿಸುವ ವಾಹನಗಳ ಮೇಲೆ ನಿಗಾ ವಹಿಸಬೇಕು. ನಾಕಾಬಂದಿ ಹಾಗೂ ಚೆಕ್ ಪೋಸ್ಟ್ ಗಳನ್ನು ಬಲಪಡಿಸಿ, ಪ್ರತಿ ವಾಹನಗಳ ತಪಾಸಣೆಯನ್ನು ತಪ್ಪದೇ ಮಾಡಬೇಕು. ಇ-ಛಾಪಾ ಕಾಗದದಲ್ಲಿ ದನ ಮಾರುವವರು ಹಾಗೂ ಕೊಳ್ಳುವವರು ಮುಚ್ಚಳಿಕೆ ಪಡೆದಿರಬೇಕು. ದನ ಸಾಕಾಣಿಕೆ ಮಾಡುವವರಲ್ಲಿ ಉಂಟಾದ ಭಯವನ್ನು ತೊಡೆದು ಹಾಕಿ ಸರ್ಕಾರ ದನ ಸಾಕಾಣಿಕೆ ಮಾಡುವವರೊಂದಿಗೆ ಇರುತ್ತೇವೆ ಎಂಬ ಭರವಸೆ ನೀಡಬೇಕು ಎಂದು ಸಚಿವ ಪ್ರಭು ಚವ್ಹಾಣ್ ಅವರು ತಿಳಿಸಿದ್ದಾರೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles