ಉಡುಪಿ: ಉಡುಪಿ ಜಾಮಿಯಾ ಮಸೀದಿಗೆ ಸಂಬಂಧಪಟ್ಟ ಕಟ್ಟಡವನ್ನು ತೆರವುಗೊಳಿಸಿದೆ. ನಗರಸಭೆ ಈ ಕಟ್ಟಡಕ್ಕೆ ಪರವಾನಗೆ ಕೊಟ್ಟಿದ್ದು, ತೆರಿಗೆಯನ್ನು ಪಡೆಯುತ್ತಿದೆ. ಹಾಗಿದ್ದರೂ ದ್ವೇಷದ ರಾಜಕಾರಣಕ್ಕೆ ಇಂದು ಮಸೀದಿಯ ಕಟ್ಟಡ ಬಲಿಯಾಗಿದೆ ಎಂದು ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆಕ್ರೋಶ ವ್ಯಕ್ತಪಡಿಸಿದರು.
ಉಡುಪಿಯಲ್ಲಿ ಸೋಮವಾರ ನಡೆದ ಸುದ್ದಿಘೋಷ್ಟಿಯಲ್ಲಿ ಮಾತನಾಡಿದ ಅವರು, ಎಸ್ಡಿಪಿಐ ಜಿಲ್ಲಾಧ್ಯಕ್ಷ ನಜೀರ್ ಅವರು ಜಾಮಿಯಾ ಮಸೀದಿಗೆ ಸೇರಿದ ಕಟ್ಟಡಲ್ಲಿ ಬಾಡಿಗೆಗೆ ಇರುವುದು. ಶಾಸಕ ರಘುಪತಿ ಭಟ್, ಎಲ್ಲಾ ಬಿಜೆಪಿ ನಾಯಕರು ಹಾಗೂ ನಗರಸಭೆಯನ್ನು ಪಶ್ನಿಸುವುದು ಇಡೀ ಉಡುಪಿ ಜಿಲ್ಲೆಯಲ್ಲಿ ಅನಧಿಕೃತ ಕಟ್ಟಡ ಎಂದು ಇರುವುದು ಜಾಮಿಯಾ ಮಸೀದಿಯ ಕಟ್ಟದ ಮಾತ್ರನಾ ಅಥವಾ ಬೇರೆ ಇದೇಯಾ ಎಂದು ಶ್ವೇತ ಪತ್ರ ಹೊರಡಿಸಬೇಕು ಎಂದರು.
ಈ ಕ್ಷೇತ್ರದ ಎಂಎಲ್ಎ ರಘುಪತಿ ಭಟ್ ಉಡುಪಿಯಲ್ಲಿ ಜಾಮಿಯಾ ಮಸೀದಿಯ ಈ ಕಟ್ಟಡ ಮಾತ್ರ ಅನಧಿಕೃತನಾ ಅಥವಾ ಬೇರೆ ಯಾವುದೇ ಕಟ್ಟಡ ಅನಧಿಕೃತ ಇಲ್ಲ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಕಟ್ಟಡ ವಿಸ್ತರಿಸಿದ್ದಕ್ಕೆ ದಂಡ ಕಟ್ಟಿಸಿಕೊಂಡು ಕಟ್ಟಡವನ್ನು ಸಕ್ರಮ ಮಾಡುವಂತ ಅಧಿಕಾರ ನಗರಸಭೆಗೆ ಇರುತ್ತದೆ ಹಾಗಿದ್ದರೂ ದ್ವೇಷ ರಾಜಕಾರಣಕ್ಕೆ ಕಟ್ಟಡ ತೆರವುಗೊಳಿಸಲಾಗಿದೆ ಎಂದರು.
ಇಡೀ ರಾಷ್ಟ್ರದಲ್ಲಿ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ವಿಶ್ವದ ಅತಿ ದೊಡ್ಡ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿ ತನ್ನ ರಾಜಕೀಯ ಅಸ್ತಿತ್ವವನ್ನು ವೋಟ್ ಬ್ಯಾಂಕ್ ಅನ್ನು ಉಳಿಸಿಕೊಳ್ಳಲು ಹಿಂದೂ ಮುಸ್ಲಿಂ ಅನ್ನು ಬಳಸಿಕೊಳ್ಳುತ್ತಿದೆ. ಇದು ಅವರ ಶೋಚನೀಯ ಸ್ಥಿತಿ. ಈ 8ವರ್ಷದಲ್ಲಿ ದೇಶದ 135ಕೋಟಿ ಜನರಿಗೆ ಏನೂ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.