ಮಂಗಳೂರು: ಎಮ್ಮೆಕೆರೆ ಮೈದಾನದಲ್ಲಿ ಏಪ್ರಿಲ್ 28ರಂದು ನಡೆದ ರೌಡಿ ಶೀಟರ್ ರಾಹುಲ್ ಕಕ್ಕೆ(27) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಎಮ್ಮೆಕೆರೆ ನಿವಾಸಿ ಮಹೇಂದ್ರ ಶೆಟ್ಟಿ (27), ಬೋಳಾರ್ ನಿವಾಸಿ ಅಕ್ಷಯ್ ಕುಮಾರ್ (25), ಎಮ್ಮಕೆರೆ ನಿವಾಸಿ ಸುಶಿತ್ (20), ಮಾರ್ಗನ್ಗೇಟ್ ನಿವಾಸಿ ದಿಲ್ಲೇಶ್ ಬಂಗೇರ (21), ಬೋಳಾರ್ ನಿವಾಸಿ ಶುಭಂ (26), ವಿಷ್ಣು(20) ಎಂದು ಗುರುತಿಸಲಾಗಿದೆ.
ಮಹೇಂದ್ರ ಗಲ್ಫ್ನಲ್ಲಿ ಕೆಲಸ ಮಾಡುತ್ತಿದ್ದು, ಅಕ್ಷಯ್ ಕುಮಾರ್ ಅಬುದಾಬಿಯಲ್ಲಿ ಎಸಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದು, ಸುಶಿತ್ ಮಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ಓದುತ್ತಿದ್ದಾನೆ.