ಉಡುಪಿ: ಕಿದಿಯೂರು ಹೋಟೆಲ್ ನ ಆವರಣದಲ್ಲಿರುವ ನಾಗದೇವರ ಸನ್ನಿಧಿಯ 34ನೇಯ ವಾರ್ಷಿಕೋತ್ಸವದ ಅಂಗವಾಗಿ ಕಿದಿಯೂರು ಹೋಟೆಲ್ಸ್ ಪ್ರೈ.ಲಿ. ಉಡುಪಿ ಅವರು ಫೆ.16ರಂದು ವಾರ್ಷಿಕ ಪೂಜಾ ಮಹೋತ್ಸವವನ್ನು ಆಯೋಜಿಸಿದ್ದಾರೆ.
ಫೆ.16ರಂದು ಬೆಳಿಗ್ಗೆ 7.30 ಗಂಟೆಯಿಂದ ಆಶ್ಲೇಷ ಪೂಜೆ, ನವಕ ಕಲಶ ಪ್ರಧಾನ ಹೋಮ, ಕ್ಷೀರಾಭಿಷೇಕ ಹಾಗೂ ಗೆಂದಾಳಿ ಬೊಂಡಾಭಿಷೇಕ ಜರಗಲಿರುವುದು. 12 ಗಂಟೆಗೆ ಜ್ಯೋತಿಷ್ಯವಿದ್ವಾನ್ ಕಡಿಯಾಡಿ ಜಯರಾಂ ಆಚಾರ್ಯ, ಮುರಳೀ ಭಟ್ ಮತ್ತು ಬಳಗ ಇವರ ನೇತೃತ್ವದಲ್ಲಿ ಮಹಾಪೂಜೆ ಜರಗಲಿರುವುದು. ಮಧ್ಯಾಹ್ನ 12.45ರಿಂದ ಅನ್ನಸಂತರ್ಪಣೆ ನಡೆಯಲಿದೆ.