ಮೂಡುಬಿದಿರೆ: ರಾಷ್ಟ್ರೀಯ ಮಟ್ಟದ ವೇಟ್ಲಿಫ್ಟರ್ ಮೂಡುಬಿದಿರೆ ಕೃಷ್ಣ ಸುವರ್ಣ (70) ಮಂಗಳವಾರ ನಿಧನರಾದರು.
ಮೂಡುಬಿದಿರೆ ಸಮಗಾರಗುಂಡಿ ನಿವಾಸಿ ಕೃಷ್ಣ ಅವರು ಮಂಗಳೂರಿನ ಬಾಲಾಂಜನೇಯ ವ್ಯಾಯಾಮ ಶಾಲೆ, ರಾಮಾಂಜನೇಯ ವ್ಯಾಯಾಮ ಶಾಲೆಯಲ್ಲಿ ತರಬೇತಿ ಪಡೆದಿದ್ದಾರೆ. ಪವರ್ ಲಿಫ್ಟರ್, ಕುಸ್ತಿ ಪಟುವೂ ಆಗಿದ್ದ ಅವರು ಮಂಗಳೂರಿನ ತಾಜ್ಮಹಲ್ ಹೋಟೆಲ್ನಲ್ಲಿ ನೌಕರರಾಗಿ ನಿವೃತ್ತಿ ಹೊಂದಿದ್ದರು. ಮೃತರು ಪತ್ನಿ, ಪುತ್ರಿ, ಇಬ್ಬರು ಪುತ್ರರನ್ನು ಅವರು ಅಗಲಿದ್ದಾರೆ.