Sunday, June 8, 2025

ಆರ್​ಎಫ್​ಓ ಸಂಧ್ಯಾ ಅವರ ವರ್ಗಾವಣೆಗೆ ಆದೇಶ

ಮಂಗಳೂರು: ಕರ್ನಾಟಕ ಸರ್ಕಾರವು ಅರಣ್ಯ ಸಂಚಾರಿ ದಳದ ಮಹಿಳಾ ಅಧಿಕಾರಿ ಸಂಧ್ಯಾ ಅವರನ್ನು ಬೀದರ್​ನ ಅರಣ್ಯ ತರಬೇತಿ ಕೇಂದ್ರಕ್ಕೆ ವರ್ಗಾವಣೆ ಮಾಡಿರುವುದಾಗಿ ಆದೇಶ ಹೊರಡಿಸಿದೆ. ಈ ಮೂಲಕ ಶಾಸಕ ಹರೀಶ್ ಪೂಂಜಾ ಅವರು ಆರ್​ಎಫ್​ಓ ಸಂಧ್ಯಾ ಅವರನ್ನು ವರ್ಗಾವಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಶಾಸಕ ಹರೀಶ್ ಪೂಂಜಾ ಅವರ ಆಪ್ತರಾದ ಬಾಲಕೃಷ್ಣ ಶೆಟ್ಟಿ ಅವರು ಅನುಮತಿಯಿಲ್ಲದೇ 12 ಲಕ್ಷ ಮೌಲ್ಯದ ಮರಗಳನ್ನು ಕೊಂಡೊಯ್ಯುತ್ತಿದ್ದರು. ಈ ವೇಳೆ ಅರಣ್ಯಾಧಿಕಗಳು ದಾಳಿ ಮಾಡಿದ್ದು, ಶಾಸಕರ ಪ್ರಭಾವದಿಂದ ಎಫ್ಐಆರ್ ದಾಖಲೆ ಮಾಡಿರಲಿಲ್ಲ. ಪ್ರಕರಣವನ್ನು ಮೇಲಾಧಿಕಾರಿ ಸಂಧ್ಯಾ ಅವರು ತನಿಖೆ ನಡೆಸುತ್ತಿದ್ದರು. ತನಿಖೆಯ ನಂತರ ಮೂವರು ಅರಣ್ಯ ಅಧಿಕಾರಿಗಳ ಅಮಾನತು, ಶಾಸಕರ ಆಪ್ತರಾದ ಬಾಲಕೃಷ್ಣ ಶೆಟ್ಟಿ ಮೇಲೆ ಎಫ್ಐಆರ್ ದಾಖಲಿಸಿ, ಮರಗಳು ಹಾಗೂ ಪಂಚಮುಖಿ ಹೆಸರಿನ ಲಾರಿಯನ್ನು ವಶಕ್ಕೆ ಪಡೆಯಲಾಯಿತು. ತನಿಖೆಯ ನಂತರ ಶಾಸಕರು ಆರ್​ಎಫ್​ಓ ಸಂಧ್ಯಾ ಅವರನ್ನು ವರ್ಗಾವಣೆ ಮಾಡಲು ಸಿಎಂ ಗೆ ಪತ್ರ ಬರೆದಿದ್ದರು.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles