ರಾಜ್ಯದಲ್ಲಿ ಸೃಷ್ಟಿಯಾದ ಧರ್ಮ ದಂಗಲ್ ವಿಚಾರವಾಗಿ ಸರ್ಕಾರ ಮತೀಯ ವಾದದಿಂದ ಪ್ರಯೋಜನ ಪಡೆಯುವ ಕನಸಲ್ಲಿದೆ. ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದ ಒಬ್ಬನೇ ಒಬ್ಬ ಕಾರ್ಯಕರ್ತನ ಹೆಸರಿಲ್ಲ ಎಂದು ಮಾಜಿ ಸಚಿವ ಬಿ ರಮನಾಥ್ ರೈ ಹೇಳಿದ್ದಾರೆ.
ಈ ಕುರಿತು ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತೀಯ ವಾದದಿಂದ ಗಲಾಟೆ ನಡೆದ್ರೆ ಕಾಂಗ್ರೆಸ್ ಗಲಾಟೆ ಮಾಡಿಸಿದ್ದು ಅಂತಾರೆ. ಹರೀಶ್ ಪೂಜಾರಿ ಒಬ್ಬ ಅಮಾಯಕ ಯುವಕ. ಹತ್ಯೆ ಮಾಡಿದವರನ್ನ ಬಂಧಿಸಿ,ಜಾಮೀನಿನಲ್ಲಿ ಬಿಡುಗಡೆ ಮಾಡಿದರು. ಹತ್ಯೆಯ ಪ್ರಕರಣಗಳಲ್ಲಿ ಬಿಜೆಪಿ ಕಾರ್ಯಕರ್ತರ ಹೆಸರುಗಳಿವೆ ಹೊರತು ಕಾಂಗ್ರೆಸ್ ಕಾರ್ಯಕರ್ತರದ್ದಲ್ಲ. ಕೆಲವರು ರಾಜ್ಯದಲ್ಲಿ ಪ್ರಚೋದನಕಾರಿ ಭಾಷಣ ಮಾಡುತ್ತಾರೆ. ಗಲಾಟೆ ಮಾಡುವ ಉದ್ದೇಶದಿಂದ ಪ್ರಚೋದನಕಾರಿ ಭಾಷಣ ಮಾಡುತ್ತಾರೆ. ಕಾಂಗ್ರೆಸ್ ನಾಯಕರು ಪ್ರಚೋದನಕಾರಿ ಭಾಷಣ ಮಾಡಿದ ಒಂದು ತುಣುಕು ಇದ್ದರೆ ತೋರಿಸಿ. ರಾಜ್ಯದಲ್ಲಿ ಸಾಮರಸ್ಯ ಕದಡಿದವರಿಗೆ ಮುಂದೆ ಜನರ ತಕ್ಕ ಪಾಠ ಕಲಿಸುತ್ತಾರೆ ಎಂದು ಬಿಜೆಪಿ ವಿರುದ್ಧ ಸಚಿವ ರಮಾನಾಥ ರೈ ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಸಾಮರಸ್ಯ ಕದಡಿದವರಿಗೆ ಜನರೇ ತಕ್ಕ ಪಾಠ ಕಲಿಸ್ತಾರೆ-ರಮಾನಾಥ ರೈ
Subscribe
Login
0 Comments