ಕುಂದಾಪುರ: ರೈತರಿಗೆ ಅಗತ್ಯವಾಗಿರುವ ಎಲ್ಲಾ ಅಂಗಡಿ, ಉಪಕರಣ ಒಂದೇ ಸೂರಿನಡಿಯಲ್ಲಿ ನೀಡುವ ಅಗ್ರಿಮಾಲ್ನ ಯೋಜನೆ ಅತ್ಯಂತ ಅಗತ್ಯವಾಗಿದೆ. ಈ ಮಾಲ್ನಲ್ಲಿ ಮಲ್ಟಿಪ್ಲೆಕ್ಸ್ ಸಿನಿಮಾ ಥಿಯೇಟರ್ ನಿರ್ಮಾಣ ಮಾಡಲು ಸಂಬAಧಪಟ್ಟವರ ಯೋಜನೆಯಿದ್ದು ಅವಕಾಶ ದೊರೆಕಿದಲ್ಲಿ ನಾನೇ ಥಿಯೇಟರ್ ಮಾಡುವೆ ಎಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದಾರೆ.
ತಂದೆ ಊರಲ್ಲಿ ಮಲ್ಟಿಫ್ಲೆಕ್ಸ್ ನಿರ್ಮಿಸುವ ಭಾಗ್ಯ ದೊರತರೆ ಜೀವನದಲ್ಲೇ ಇದೊಂದು ಉತ್ತಮ ಗಳಿಗೆ ಎಂದು ಹೇಳುವ ಮೂಲಕ ಅವರು ತಾಲೂಕು ಕೇಂದ್ರವಾಗಿ ಬೆಳೆಯುತ್ತಿರುವ ಬೈಂದೂರಿನ ಜನತೆಗೆ ಸಂತಸದ ಸುದ್ದಿ ನೀಡಿದರು.
ಬಳಿಕ ಮಾತನಾಡಿದ ಗೌರಿಗದ್ದೆಯ ದತ್ತಾಶ್ರಮದ ಶ್ರೀ ವಿನಯ ಗುರೂಜಿ ಅವರು, ೫ಬಡ ರೈತ ಮಕ್ಕಳನ್ನು ದತ್ತು ಪಡೆದು ಅವರ ವಿಧ್ಯಾಭ್ಯಾಸದಿಂದ ಆರಂಭಿಸಿ ಉದ್ಯೋಗ ಸಹಿತ ಮದುವೆ ತನಕ ಎಲ್ಲಾ ಖರ್ಚು ಭರಿಸುವ ಜವಬ್ದಾರಿ ತೆಗೆದುಕೊಳ್ಳುವ ಪ್ರತಿಜ್ಞೆಯನ್ನು ಮಾಡಿದರು. ಇನ್ನು, ತನ್ನ ಗುರುಗಳ ಹುಟ್ಟು ಹಬ್ಬದಂದು ಗಾಂಧೀ ಕುಟೀರ ಎಂಬ ಯೋಜನೆಯಲ್ಲಿ ಮನೆ ಕಟ್ಟಿಸಿಕೊಡುತ್ತಿದ್ದು ಇಲ್ಲಿನ ರೈತರಲ್ಲಿ ಅತೀ ಬಡವರಾಗಿದ್ದು ಮನೆ ಅಗತ್ಯವುಳ್ಳವರಿಗೆ ಸೂರು ನಿರ್ಮಿಸಿಕೊಡುವುದಾಗಿ ವಿನಯ್ ಗುರೂಜಿ ಹೇಳಿದರು.