Sunday, June 8, 2025

ಅವಸರದ ಊಟ ಅನಾರೋಗ್ಯಕ್ಕೆ ಕಾರಣ..!

ಇತ್ತೀಚಿನ ಅವಸರದ ಜೀವನನಲ್ಲಿ ಕೆಲವರಿಗೆ ನೆಮ್ಮದಿಯಿಂದ ಕೂತು ಊಟ ಮಾಡಲೂ ಸಮಯ ಇರುವುದಿಲ್ಲ. ಅವಸರವಾಗಿ ಊಟ ಮಾಡುವುದು, ಹೊತ್ತಲ್ಲದ ಹೊತ್ತಿನಲ್ಲಿ ಊಟ ಮಾಡುವುದು ಕೆಲವರಿಗೆ ಸಾಮಾನ್ಯವಾಗಿಬಿಟ್ಟಿದೆ. ಆದರೆ ಹೀಗೆ ಅವಸರವಾಗಿ ಊಟ ಮಾಡುವುದು ಅನಾರೋಗ್ಯಕ್ಕೆ ಕಾರಣವಾಗಬಹುದು.

  • ಆಹಾರವನ್ನು ಅವಸರವಾಗಿ ತಿನ್ನುವಾಗ ಸರಿಯಾಗಿ ಜಗಿದು ತಿಂದಿರುವುದಿಲ್ಲ. ಇದರಿಂದ ಜೀರ್ಣಕ್ರಿಯೆಯಲ್ಲಿ ತೊಂದರೆ ಉಂಟಾಗಿ ಅನೇಕ ಖಾಯಿಲೆಗಳು ನಮ್ಮನ್ನು ಕಾಡುತ್ತದೆ.
  • ಅವಸರದಲ್ಲಿ ತಿನ್ನುವಾಗ ಹಸಿವು ಬೇಗನೆ ನಿವಾರಣೆಯಾಗುವುದಿಲ್ಲ. ಮತ್ತೆ ಮತ್ತೆ ತಿನ್ನಬೇಕೆನಿಸುತ್ತದೆ. ಇದರಿಂದ ದೇಹದ ಕೊಬ್ಬು ಹೆಚ್ಚಾಗಿ ತೂಕ ಹೆಚ್ಚಾಗುತ್ತದೆ.
  • ಆಹಾರವನ್ನು ತರಾತುರಿಯಲ್ಲಿ ತಿನ್ನುವುದರಿಂದ ದೇಹದಲ್ಲಿ ಇನ್ಸುಲಿನ್ ಪ್ರತಿರೋಧಕ ಹೆಚ್ಚಾಗಿ ದೇಹದಲ್ಲಿನ ಮಧುಮೇಹ ಹೆಚ್ಚಾಗುತ್ತದೆ.
  • ಅವಸರದಲ್ಲಿ ಆಹಾರವನ್ನು ಸೇವಿಸುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ. ಇದರಿಂದ ವಾಂತಿ, ವಾಕರಿಕೆ, ಹೊಟ್ಟೆಯಲ್ಲಿ ಉರಿ, ಎದೆನೋವು ಮುಂತಾದ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಹಾಗೆ ಜಠರ ಸಂಬಂಧಿ ಖಾಯಿಲೆಗಳು ಉದ್ಭವವಾಗುವ ಸಾಧ್ಯತೆ ಇದೆ.
  • ತರಾತುರಿಯಲ್ಲಿ ಊಟ ಮಾಡುವುದರಿಂದ ದೇಹದ ಚಯಾಪಚಯ ಕ್ರಿಯೆ ನಿಧಾನವಾಗಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುತ್ತದೆ. ಇದರಿಂದ ಹೃದಯಾಘಾತ ಹಾಗೂ ಪಾರ್ಶ್ವವಾಯು ಆಗುವ ಅಪಾಯ ಹೆಚ್ಚು.

ಅವಸರದಲ್ಲಿ ಊಟ ಮಾಡುವ ಬದಲು ಊಟಕ್ಕೆ ಸಮಯ ನಿಗದಿ ಪಡಿಸಿ ನಿಧಾನವಾಗಿ ಊಟ ಮಾಡುವುದು ಆರೋಗ್ಯಕ್ಕೆ ಉತ್ತಮ. ಇದರಿಂದ ಹಲವು ಖಾಯಿಲೆಗಳಿಂದ ದೂರವಿರಬಹುದು.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles