ನವದೆಹಲಿ: ಉಕ್ರೇನ್ಗೆ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ಹೋಗುತ್ತಿದ್ದ ಏರ್ಇಂಡಿಯಾ ವಿಮಾನವು ಮಾರ್ಗಮಧ್ಯದಲ್ಲೇ ದೆಹಲಿಗೆ ಹಿಂತಿರುಗಿದೆ. ರಷ್ಯಾ ಯುದ್ಧ ಘೋಷಿಸಿದ ಬೆನ್ನಲ್ಲೇ ಉಕ್ರೇನ್ ತನ್ನ ವಾಯುಪ್ರದೇಶವನ್ನು ಮುಚ್ಚಿದ ಹಿನ್ನಲೆಯಲ್ಲಿ ವಿಮಾನ ಹಿಂತಿರುಗಿದೆ.
ರಷ್ಯಾ ಹಾಗೂ ಉಕ್ರೇನ್ ಸಮರದ ನಡುವೆ ಉಕ್ರೇನ್ನಲ್ಲಿರುವು ವಿದ್ಯಾರ್ಥಿಗಳು ಹಾಗೂ ಸಾವಿರಾರು ಭಾರತೀಯರು ಸ್ವದೇಶಕ್ಕೆ ಮರಳಲು ಕಾಯುತ್ತಿದ್ದರು. ಈ ವೇಳೆ ಉಕ್ರೇನ್ಗೆ ತೆರಳುವ ಎಲ್ಲಾ ವಿಮಾನಗಳ ವಿಮಾನಯಾನ ಸಿಬ್ಬಂದಿಗೆ ಸೂಚನೆ ನೀಡಿದ ಹಿನ್ನಲೆಯಲ್ಲಿ ಏರ್ಇಂಡಿಯಾ ವಿಮಾನವು ದೆಹಲಿಗೆ ಮರಳಲು ನಿರ್ಧರಿಸಿತು.
ರಷ್ಯಾದ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಇಂದು ಬೆಳಿಗ್ಗೆ ಯುದ್ಧ ಘೋಷಣೆ ಮಾಡಿದ ಬೆನ್ನಲ್ಲೇ ಉಕ್ರೇನ್ ರಷ್ಟಾದ 5 ವಿಮಾನಗಳನ್ನು ಹಾಗೂ ಒಂದು ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿದೆ.