ಹೆಬ್ರಿ: ಶಾಂತಿನಿಕೇತನ ಸಂಸ್ಥೆಯು ಹೆಬ್ರಿಯಲ್ಲಿ ವಿವಿಧ ವಲಯಗಳಲ್ಲಿ ವಿಭಿನ್ನ ರೀತಿಯಲ್ಲಿ ಸೇವೆ ಮಾಡುವುದರ ಮೂಲಕ ಹೆಬ್ರಿಯಲ್ಲಿ ಗುರುತಿಸಿಕೊಂಡಿದೆ. ಈ ಸಂಸ್ಥೆ ಹೆಬ್ರಿಯ ಹೆಮ್ಮೆಯ ಸಂಸ್ಥೆ ಎಂದು ಅಮೃತ ಭಾರತೀಯ ಟ್ರಸ್ಟ್ ನ ಕಾರ್ಯದರ್ಶಿ ಹೆಚ್ ಗುರುದಾಸ್ ಶೆಣೈ ಹೇಳಿದರು.
ಅವರು ಹೆಬ್ರಿಯ ಕುಚ್ಚೂರು ಶಾಂತಿನಿಕೇತನ ಯುವ ವೃಂದಕ್ಕೆ ದೊರೆತ ರಾಜ್ಯ ಮಟ್ಟದ ಅತ್ಯುತ್ತಮ ಯುವ ಮಂಡಲ ಪ್ರಶಸ್ತಿಯ ಹಿನ್ನೆಲೆ ಹೆಬ್ರಿಯಲ್ಲಿ ಸೋಮವಾರ ಶಾಂತಿನಿಕೇತನದ ಸದಸ್ಯರು ನಡೆಸಿದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಾಂತಿನಿಕೇತನ ಯುವ ವೃಂದದ ಅಧ್ಯಕ್ಷ ರಾಜೇಶ್ ಧನ್ಯವಾದ ತಿಳಿಸಿದರು. ಸಂಘದ ಪೋಷಕರಾದ ಹೆಬ್ರಿ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಡಾ. ಭಾರ್ಗವಿ ಆರ್ ಐತಾಳ್, ಅಮೃತಭಾರತಿ ಟ್ರಸ್ಟ್ ಕಾರ್ಯದರ್ಶಿ ಗುರುದಾಸ ಶೆಣೈ, ಪಂ. ಸದಸ್ಯರಾದ ಹೆಬ್ರಿಯ ಎಚ್.ಜನಾರ್ಧನ್, ಕುಚ್ಚೂರಿನ ಮಹೇಶ ಶೆಟ್ಟಿ, ಮಹೇಶ ಶೆಟ್ಟಿ ಬಾದ್ಲು, ಸಮಾಜಸೇವಕ ಶ್ರೀಕಾಂತ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.