ಮಂಗಳೂರು: ಮಂಗಳೂರು ಹೊರವಲಯದ ಗಂಜಿಮಠ ಬಳಿಯ ಮಳಲಿ ಎಂಬಲ್ಲಿ ಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ದರ್ಗಾದಲ್ಲಿ ದೇವಸ್ಥಾನ ಪತ್ತೆಯಾಗಿತ್ತು. ಈ ಹಿನ್ನೆಲೆ ಹಿಂದೂ ಸಂಘಟನೆ ಬುಧವಾರ ತಾಂಬೂಲ ಪ್ರಶ್ನೆ ಇಟ್ಟಾಗ ಅಲ್ಲಿ ದೇವಸ್ಥಾನ ಇರುವುದು ಖಚಿತವಾಗಿದೆ.
ಈ ಕುರಿತು ಶರಣ್ ಪಂಪ್ವೆಲ್ ಮಾತನಾಡಿದ್ದು, ಕಳೆದ ಹಲವಾರು ದಿವಸಗಳಿಂದ ಅದು ಹಿಂದೂಗಳ ಮಂದಿರ. ಅಲ್ಲಿ ದೇವತಾ ಸಾನಿಧ್ಯ ಇತ್ತು ಎನ್ನುವಂತ ದೃಷ್ಟಿಯಿಂದ ಮೊದಲಿಂದನೂ ನಾವು ಹೋರಾಟವನ್ನು ಮಾಡುತ್ತಿದ್ದೆವು. ಅದರ ಪೂರ್ವಭಾವಿಯಾಗಿ ಆ ಸಾನಿಧ್ಯದಲ್ಲಿ ದೇವತಾ ಸಾನಿಧ್ಯ ಇದೆಯಾ..? ಇದ್ದರೆ ಯಾವ ದೇವ ಸಾನಿಧ್ಯ ಎನ್ನುವುದನ್ನು ತಿಳಿದುಕೊಳ್ಳ ಬೇಕಿತ್ತು. ಈ ಹಿನ್ನೆಲೆಯಲ್ಲಿ ನಾವು ಇವತ್ತು ತಾಂಬೂಲ ಪ್ರಶ್ನೆಯನ್ನು ಇಟ್ಟಿದ್ದೆವು. ಈ ವೇಳೆ ಅಲ್ಲಿ ದೈವತಾ ಸಾನಿಧ್ಯ ಇದೆ. ಶಿವನ ಸಾನಿಧ್ಯ ಇಲ್ಲಿ ಇದೆ ಎನ್ನುವುದು ಸ್ಪಷ್ಟವಾಗಿದೆ. ಈ ಹಿನ್ನೆಲೆ ನಾನು ಮಸೀದಿಯ ಕಮೀಟಿಯವರಲ್ಲಿ ಆ ಜಾಗವನ್ನು ಹಿಂದೂಗಳಿಗೆ ಬಿಟ್ಟುಕೊಡಿ ಎಂದು ವಿನಂತಿಯನ್ನು ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಮಳಲಿ ಮಸೀದಿಯ ಜಾಗದಲ್ಲಿ ಶಿವನ ಸಾನಿಧ್ಯ ಇರುವುದು ಸ್ಪಷ್ಟ: ಹಿಂದೂಗಳಿಗೆ ಜಾಗ ಬಿಟ್ಟುಕೊಡುವಂತೆ ಶರಣ್ ಪಂಪ್ವೆಲ್ ಮನವಿ
Subscribe
Login
0 Comments