ಮಂಗಳೂರು: ಅಪ್ಪು ಹುಟ್ಟುವಾಗಲೇ ಸೂಪರ್ ಸ್ಟಾರ್ ಆಗಿದ್ದ, ದಿನ ಕಳೆದರೂ ನೋವು ಕಡಿಮೆಯಾಗುತ್ತಿಲ್ಲ. ಪುನೀತ್ ನೆನಪಲ್ಲಿ ಸಂಭ್ರಮಿಸೋಣ ಎಂದು ನಟ ಶಿವರಾಜ್ ಕುಮಾರ್ ಅವರು ತಮ್ಮನ ನೆನನಪಿನಲ್ಲಿ ಭಾವನಾತ್ಮಕ ಹೇಳಿಕೆ ನೀಡಿದ್ದಾರೆ.
ಸೋಮವಾರ ಮಂಗಳೂರು ಪೊಲೀಸ್ ವತಿಯಿಂದ ಆಯೋಜಿಸಲಾದ ಪುನೀತ್ ರಾಜ್ ಕುಮಾರ್ ಸಂಸ್ಮರಣೆ ಕಾರ್ಯಕ್ರಮಲ್ಲಿ ಶಿವರಾಜ್ ಕುಮಾರ್ ಅವರು ಭಾಗಿಯಾಗಿ ಮಾತನಾಡಿದರು. ಬಳಿಕ ಪೊಲೀಸ್ ಸಿಬ್ಬಂದಿಗಳೊAದಿಗೆ ಹಾಡೊಂದಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರ ಹಾಡಿಗೆ ಶಿವರಾಜ್ ಕುಮಾರ್ ಹೆಜ್ಜೆ ಹಾಕಿ ನೆರೆದಿದ್ದ ಪೊಲೀಸರನ್ನು ಸಂಭ್ರಮದಲ್ಲಿ ತೇಲಾಡಿಸಿದರು.
ಇನ್ನು, ನಟ ಶಿವರಾಜ್ಕುಮಾರ್ ತುಳು, ಕನ್ನಡ ಬೇರೆ ಬೇರೆ ಅಲ್ಲ. ಮಂಗಳೂರು ನನಗೆ ತುಂಬಾ ಇಷ್ಟದ ಊರು ಎಂದರು. ಕೊನೆಗೆ ಪೊಲೀಸರು ಶಿವಣ್ಣ ಜತೆ ಸೆಲ್ಫಿಗಳನ್ನೂ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.