Sunday, June 8, 2025

ಆರು ವರ್ಷಗಳ ಬಳಿಕ ಸುಳ್ಯ ಕಸದ ಸಮಸ್ಯೆಗೆ ಸಿಕ್ತು ಮುಕ್ತಿ: ಕಸ ವಿಲೇವಾರಿ ಪ್ರಕ್ರಿಯೆ ಆರಂಭ

ಸುಳ್ಯ: ಸುಳ್ಯ ನಗರದ ಬಹುದೊಡ್ಡ ಸಮಸ್ಯೆಯಲ್ಲಿ ಒಂದಾದ ನಗರ ಪಂಚಾಯತ್ ಆವರಣದಲ್ಲಿ ತುಂಬಿಟ್ಟಿದ್ದ ಕಸದ ಸಮಸ್ಯೆ ಹಲವಾರು ಪ್ರತಿಭಟನೆಗಳಿಗೆ, ನಗರ ಪಂಚಾಯತ್ ಸಾಮಾನ್ಯ ಸಭೆಗಳಲ್ಲಿ ಪರಸ್ಪರ ವಾಗ್ವಾದಗಳಿಗೆ ಕಾರಣವಾಗಿ ಪಂಚಾಯತ ಆಡಳಿತವನ್ನು ತಬ್ಬಿಬ್ಬುಗೊಳಿಸಿತ್ತು. ಇದೀಗ ಕಳೆದ ಆರು ವರ್ಷಗಳ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ನಗರ ಪಂಚಾಯತ್ ಕಳೆದ ಕೆಲವು ದಿನಗಳಿಂದ ಕಸ ವಿಲೇವಾರಿಯ ಟೆಂಡರ್ ಪ್ರಕ್ರಿಯೆ ಆರಂಭಿಸಿದ್ದು, ಇದೀಗ ಬೆಳಗಾಂ ಮೂಲದ ಸಂಸ್ಥೆಯೊಂದು ನಗರ ಪಂಚಾಯತ್ ಆವರಣದಲ್ಲಿ ಶೇಖರಿಸಲಾಗಿರುವ ಕಸದ ವಿಲೇವಾರಿಯನ್ನು ಮಾಡಲು ಆರಂಭಿಸಿದೆ.
ಈ ಕುರಿತು ಟೆಂಡರ್ ದಾರ ಹನಿಫ್ ಎಂಬುವವರು ಮಾತನಾಡಿ, ಈ ಪರಿಸರದಲ್ಲಿ ಇರುವ ಸುಮಾರು 400 ಟನ್ ಗಳಷ್ಟು ಕಸವನ್ನು ಬರುವ 45 ದಿನಗಳ ಒಳಗೆ ಖಾಲಿ ಮಾಡುವುದಾಗಿ ಸಮಯಾವಕಾಶವನ್ನು ಕೇಳಿದ್ದೇವೆ. ಅದರಂತೆ ಇದೇ ಸೋಮವಾರ ದಿನದಿಂದ 3 ಲಾರಿಗಳನ್ನು ಬಳಸಿ ಕಸ ವಿಲೇವಾರಿ ಕಾರ್ಯವನ್ನು ಮಾಡಲಾಗುತ್ತದೆ ಎಂದು ಹೇಳಿದರು.
ಇದೇ ವೇಳೆ, ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಮಾತನಾಡಿ, ಕಳೆದ ಆರು ವರ್ಷಗಳಿಂದ ಸುಳ್ಯ ನಗರ ಪಂಚಾಯತ್ ಆವರಣದಲ್ಲಿ ಕೆಲವು ಕಾರಣಗಳಿಂದ ಅವೈಜ್ಞಾನಿಕ ಸ್ಥಿತಿಯಲ್ಲಿ ಇಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಮೊದಲಿನೆಯದಾಗಿ ಕಸ ವಿಲೇವಾರಿಗೆ ಸೂಕ್ತ ಸ್ಥಳಗಳು ನಮ್ಮಲ್ಲಿ ಇರಲಿಲ್ಲ. ಕಸ ವಿಲೇವಾರಿಯನ್ನು ಕ್ರಮಬದ್ಧವಾಗಿ ಮಾಡಬೇಕೆಂಬುದು ನಮ್ಮ ಚಿಂತನೆಯಾಗಿತ್ತು. ಅದಕ್ಕೆ ಬೇಕಾಗಿ ಹಲವಾರು ರೀತಿಯ ಪ್ರಯೋಗಗಳನ್ನು ನಡೆಸಿದ್ದೇವೆ. ಇದೀಗ ಟೆಂಡರ್‌ದಾರರು ಸಿಕ್ಕಿರುವ ಹಿನ್ನೆಲೆ ಪಂಚಾಯತ್ ಆವರಣದ ಕಸವನ್ನು ವಿಲೇವಾರಿ ಮಾಡಿ ಪರಿಸರದ ಸ್ವಚ್ಛತೆಯನ್ನು ಕಾಪಾಡಿ ಕೊಳ್ಳಲಾಗುವುದು ಎಂದರು.
ಕಲ್ಚರ್ಪೆ ಕಸದ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆಯವರೊಂದಿಗೆ ಜಾಗದ ಕುರಿತು ಮಾತುಕತೆ ನಡೆದು ಅಂತಿಮ ಘಟ್ಟಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಅಲ್ಲಿಯ ಸಮಸ್ಯೆಯೂ ಕೂಡ ಬಗೆಹರಿಯುವ ಎಲ್ಲಾ ಲಕ್ಷಣಗಳು ಪೂರಕವಾಗಿ ಕಂಡುಬರುತ್ತಿದೆ ಎಂದು ಹೇಳಿದರು.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles