ಕಾಪು: ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಕಾಪು ವಲಯದ ಕ್ರೀಡಾ ಕೂಟವು ಕಾಪು ಮಹಾದೇವಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಿತು.
ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಪಾಧ್ಯಕ್ಷ ಪದ್ಮಪ್ರಸಾದ್ ಜೈನ್, ಛಾಯಾಗ್ರಾಹಕರು ದಿನನಿತ್ಯ ಕೆಲಸದ ಒತ್ತಡದಲ್ಲಿ ಇರುತ್ತಾರೆ. ಅವರ ಮಾನಸಿಕ ಒತ್ತಡ ದೂರಗೊಳಿಸಲು ಕ್ರೀಡೆ ಸಹಕಾರಿ ಆಗಿದೆ. ಆ ನಿಟ್ಟಿನಲ್ಲಿ ಕಾಪು ವಲಯದ ಸದಸ್ಯರು ಆಯೋಜಿಸಿರುವ ಕ್ರೀಡಾ ಕೂಟ ಯಶಸ್ಸು ಕಾಣಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ವಲಯದ ಅಧ್ಯಕ್ಷ ವಿನೋದ್ ಕಾಂಚನ್ ವಹಿಸಿದ್ದರು.
ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಉದ್ಯಮಿ ಕಾಪು ಮಾಧವ್ ಪಾಲನ್, ವಾಸುದೇವ್ ರಾವ್, ರವಿಕುಮಾರ್ ಕಟಪಾಡಿ, ಶ್ರೀನಿವಾಸ್ ಐತಾಳ್, ರಾಜೇಶ್ ಶಂಕರಪುರ, ಪ್ರಕಾಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.