ಬೆಂಗಳೂರು: ಬೆಂಗಳೂರಿನಲ್ಲಿ ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಉದ್ಘಾಟನೆಗೊಂಡ ಸಮಾಜ ಕಲ್ಯಾಣ ಇಲಾಖೆಯ ಸಹಾಯವಾಣಿ ಕಾರ್ಯನಿರ್ವಹಿಸುವ ಕಲ್ಯಾಣ ಕೇಂದ್ರಕ್ಕೆ ಇಂದು ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಭೇಟಿ ನೀಡಿದ್ದಾರೆ.
ಅಲ್ಲಿ ಅವರು ಸ್ವತಃ ಸಹಾಯವಾಣಿ ಕರೆ ಸ್ವೀಕರಿಸಿ ಮಾತನಾಡಿ ದೂರು ದುಮ್ಮಾನಗಳ ಕುರಿತು, ಸಮಸ್ಯೆಗಳ ಪರಿಹಾರಕ್ಕೆ ಆದೇಶಿಸಿದರು. ಕ್ಷಣ-ಕ್ಷಣಕ್ಕೂ ಬರುತ್ತಿರುವ ಹಲವಾರು ಕರೆಗಳಿಗೆ ಸಚಿವರ ಸ್ಪಂದನೆ ಮತ್ತು ಪರಿಹಾರ ಸಾರ್ವಜನಿಕರಿಗೆ ಮತ್ತು ಇಲಾಖೆಯ ಸಿಬ್ಬಂದಿಗೆ ಉತ್ಸಾಹ ತುಂಬಿದAತಾಯಿತು.