ಪರ್ಕಳ: ಉಕ್ರೇನ್ನಲ್ಲಿ ಸಿಲುಕಿದ ರಾಜ್ಯದ ಸುಮಾರು 346 ವಿದ್ಯಾರ್ಥಿಗಳಲ್ಲಿ ಜಿಲ್ಲೆಯ ಐದು ವಿದ್ಯಾರ್ಥಿಗಳಿದ್ದಾರೆ. ಆ ಪೈಕಿ ಪರ್ಕಳದ ನಿವಾಸಿಯಾದ ಪ್ರಸ್ತುತ ಹೊಸದಿಲ್ಲಿಯ ಕರ್ನಾಟಕ ಭವನದಲ್ಲಿ ವ್ಯವಸ್ಥಾಪಕರಾಗಿರುವ ಬಿ.ವಿ.ರಾಘವೇಂದ್ರದ ಪುತ್ರ ನಿಯಮ ರಾಘವೇಂದ್ರ ಅವರು ಕೂಡ ಒಬ್ಬರು.
ನಿಯಮ ಅವರು ಕಳೆದ ಡಿಸೆಂಬರ್ ತಿಂಗಳಲ್ಲಿ ಉಕ್ರೇನಿನ ವಿನ್ನಿಸಿಯಾ ನ್ಯಾಷನಲ್ ಪಿರವೋ ಮೆಡಿಕಲ್ ಯುನಿವರ್ಸಿಟಿಗೆ ಎಂಬಿಬಿಎಸ್ ಕಲಿಯಲು ತೆರಳಿದ್ದರು.
ನಿಯಮ ಅವರು ಬಂಕರ್ನಲ್ಲಿ ಸುರಕ್ಷಿತವಾಗಿದ್ದು, ಪೋಲೆಂಡ್ ಮೂಲಕ ಅಲ್ಲಿದ್ದ ವಿದ್ಯಾರ್ಥಿಗಳನ್ನು ಕರೆತರುವ ಪ್ರಯತ್ನ ನಡೆಯುತ್ತಿದೆ. ನಿಯಮ ಅಲ್ಲಿನ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮನೆಗೆ ಆಗಾಗ ದೂರವಾಣಿ ಕರೆ ಮಾಡುತಿದ್ದಾರೆ ಎಂದು ತಂದೆ ತಿಳಿಸಿದ್ದಾರೆ. ಸದ್ಯ ಎಲ್ಲಾ ವಿದ್ಯಾರ್ಥಿಗಳನ್ನು ಏರ್ಲಿಫ್ಟ್ ಮಾಡುವ ವಿಶ್ವಾಸವನ್ನು ಮನೆಯವರು ಹೊಂದಿದ್ದಾರೆ.