ಮಂಗಳೂರು: ಕಾಲೇಜಿಗೆ ಬೋಧಕರು ಸರಿಯಾಗಿ ಬರುತ್ತಿಲ್ಲ ತರಗತಿಗಳು ಸರಿಯಾಗಿ ಮಾಡುತ್ತಿಲ್ಲ ಎಂದು ಮಂಗಳೂರು ನಗರದ ಹೋಟೆಲ್ ಮ್ಯಾನೇಜ್ಮೆಂಟ್ ಕಾಲೇಜಿನ ವಿದ್ಯಾರ್ಥಿ ತಾನು ವಾಸಿಸುತ್ತಿದ್ದ ಪಿ.ಜಿ.ಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದೆ.
ಬೆಂಗಳೂರು ಮೂಲದ ಭರತ್ ಭಾಸ್ಕರ್(20) ಆತ್ಮಹತ್ಯೆ ಮಾಡಿಕೊಂಡ ಯುವಕ. ತಾಯಿಗೆ ವಾಟ್ಸಾಪ್ ನಲ್ಲಿ ಸಂದೇಶ ಹಾಗೂ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
“ನನ್ನ ಸಾವಿಗೆ ನಾನು ಸೇರಿದ ಕಾಲೇಜು ಕಾರಣ. ನಾನು ಒಂದುವರೆ ವರ್ಷ ವ್ಯರ್ಥ ಮಾಡಿದ್ದೇನೆ. ಕಾಲೇಜಿನಲ್ಲಿ ಸರಿಯಾದ ಬೋಧಕರಿಲ್ಲ ಹಾಗೂ ತರಗತಿಗಳು ಸರಿಯಾಗಿ ನಡೆಯುತ್ತಿಲ್ಲ. ಕಾಜೇಜಿನವರು ನಮ್ಮ ಬಳಿ ಡೊನೇಶನ್ ತೆಗೆದುಕೊಂಡು ಮೋಸ ಮಾಡಿದ್ದಾರೆ. ಪ್ರಾಧ್ಯಾಪಕರೊಬ್ಬರು ನಾನು ಮಾಡಿದ ಪ್ರಾಜೆಕ್ಟ್ ಸರಿಯಿಲ್ಲ ಎಂದು ಸಹಿ ಮಾಡದೇ ಮನಸ್ಸಿಗೆ ನೋವುಂಟುಮಾಡಿದ್ದಾರೆ. ನಾನು ಪರೀಕ್ಷೆಗೆ ಕೂರಲು ಸಾಧ್ಯವಿಲ್ಲ ಎಂದಿದ್ದಾರೆ. ಆದ್ದರಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ” ಎಂದು ಭರತ್ ಡೆತ್ ನೋಟ್ ಬರೆದಿದ್ದಾನೆ.
ಕಾಲೇಜು ಮಾಲೀಕ ಗಣೇಶ್ ರಾವ್, ಪ್ರಾಧ್ಯಾಪಕ ರಾಹುಲ್ ವಿರುದ್ಧ ದೂರು ದಾಖಲಾಗಿದ್ದು, ಈ ಬಗ್ಗೆ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.