ಮೂಡುಬಿದಿರೆ: ಯುವಕನೋರ್ವ ತನ್ನ ಮನೆಯ ಪಕ್ಕಾಸಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಡುಬಿದಿರೆಯ ಅರಮನೆ ಬಾಗಿಲು ಬಳಿಯಲ್ಲಿ ಶನಿವಾರ ನಡೆದಿದೆ.
ತೋಟದ ಮನೆಯ ನಿವಾಸಿ ರಾಮಚಂದ್ರ ಅವರ ಪುತ್ರ ಶಿವಪ್ರಸಾದ್ (34ವ) ಆತ್ಮಹತ್ಯೆ ಮಾಡಿಕೊಂಡ ಯುವಕ.
ಕುಡಿತದ ಚಟವನ್ನು ಹೊಂದಿದ್ದ ಶಿವ ಪ್ರಸಾದ್ ಅವರ ಪತ್ನಿ ತವರು ಮನೆಗೆ ಹೋಗಿದ್ದು, ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ನೋಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.