ಕಾರ್ಕಳ: ಸಾಮಾನ್ಯವಾಗಿ ಶಾಸಕರು ಸಚಿವರು ರಸ್ತೆ ಬದಿಯ ತಿನ್ನುವುದಿಲ್ಲ ದೊಡ್ಡ ದೊಡ್ಡ ಹೋಟೆಲ್ಗಳಲ್ಲಿ ಮಾತ್ರ ತಿನ್ನುತ್ತಾರೆ ಎಂದು ನಾವು ಭಾವಿಸಿರುತ್ತೇವೆ. ಆದರೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ, ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಅವರು ರಸ್ತೆ ಬದಿಯ ಗೂಡಂಗಡಿಯಲ್ಲಿ ಬ್ರೆಡ್ ಆಮ್ಲೆಟ್ ತಿನ್ನುವ ಮೂಲಕ ಸರಳತೆ ಮೆರೆದಿದ್ದಾರೆ.
ಕಾರ್ಕಳ ಉತ್ಸವದ ಸಂಪೂರ್ಣ ಬವಾಬ್ಧಾರಿ ಹೊತ್ತಿರುವ ಸಚಿವ ವಿ.ಸುನಿಲ್ ಕುಮಾರ್ ಅವರು ಕಾರ್ಯಕ್ರಮಗಳ ಬಿಡುವಿನ ನಡುವೆ ರಾತ್ರಿ ವೇಳೆ ಕಾರ್ಕಳದ ಮೂರು ಮಾರ್ಗದ ಸಮೀಪದಲ್ಲಿರುವ ಬೀದಿ ಬದಿಯ ಫೇಮಸ್ ಚಂದ್ರಣ್ಣನ ಗೂಡಂಗಡಿಯಲ್ಲಿ ಮನೆಯವರೊಂದಿಗೆ ಬ್ರೆಡ್ ಆಮ್ಲೆಟ್ ಸೇವಿಸಿದ್ದು, ಅವರ ಸರಳತೆಗೆ ಸಾಕ್ಷಿಯಾಗಿದೆ.