ಮೈಸೂರು: ಬೆಂಗಳೂರು–ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿ ನಡುವಿನ ದಿಂಬಂ ಘಾಟಿಯಲ್ಲಿ ರಾತ್ರಿ ವೇಳೆ ವಾಹನ ಸಂಚಾರ ಬಂದ್ ಮಾಡಿದ ಹಿನ್ನಲೆಯಲ್ಲಿ ಮದುಮಗ ಮದುವೆ ಮಂಟಪಕ್ಕೆ 2 ಕಿ.ಮೀ ನಡೆಯಬೇಕಾದ ಸಂಕಷ್ಟ ಒದಗಿತು.
ಮದ್ರಾಸ್ ಹೈಕೋರ್ಟ್ ಬೆಂಗಳೂರು-ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿ 948ರ ಹಾಸನೂರು–ಬಣ್ಣಾರಿ ಚೆಕ್ಪೋಸ್ಟ್ (ದಿಂಬಂ ಘಾಟಿ) ನಡುವೆ ಫೆ.10 ರಿಂದ ರಾತ್ರಿ 9 ರಿಂದ ಸಂಜೆ 6 ಗಂಟೆ ವರೆಗೆ ವಾಹನ ಸಂಚಾರ ನಿಷೇಧಿಸುವಂತೆ ಅರಣ್ಯ ಇಲಾಖೆಗೆ ಆದೇಶನೀಡಲಾಗಿತ್ತು. ಈ ಹಿನ್ನಲೆಯಲ್ಲಿ ಮದುಮಗ ಮಂಟಪಕ್ಕೆ ನಡೆದುಕೊಂಡು ಹೋಗಬೇಕಾಯಿತು.
ಬೆಳಿಗ್ಗೆ 6 ಗಂಟೆವರೆಗೆ ವಾಹನ ಸಂಚಾರ ನಿರ್ಬಂಧ ಇದ್ದ ಕಾರಣ ವಾಹನ ದಟ್ಟಣೆ ಅಧಿಕವಾಗಿತ್ತು. ಈ ಸಮಸ್ಯೆ ಪರಿಹಾರವಾಗಲು 2 ಗಂಟೆ ಬೇಕಿತ್ತು. ಹೀಗಾಗಿ ಮುಹೂರ್ತಕ್ಕೆ ಸರಿಯಾಗಿ ಮದುವೆ ಮಂಟಪದಲ್ಲಿರಲು ಅನಿವಾರ್ಯವಾಗಿ ಮದುಮಗ 2 ಕಿ.ಮೀ ವರೆಗೆ ನಡೆಯಬೇಕಾಗಿ ಬಂದಿತ್ತು. ಈ ಸಂದರ್ಭ ರಸ್ತೆಯುದ್ದಕ್ಕೂ ವಾಹನಗಳ ಸಾಲಿನಲ್ಲಿ ನಿಂತಿದ್ದ ಜನರು ಮದುಮಗನಿಗೆ ಶುಭಾಶಯ ಹೇಳಿದರು.