ಉಡುಪಿ: ಬಿಜೆಪಿ ಗ್ರಾಮ ಸಮಿತಿ ಇವರ ನೇತೃತ್ವದಲ್ಲಿ ದಿಶಾನಿ ಡಿಜಿಟಲ್ ಎಂಟರ್ಪ್ರೈಸಸ್ ಸಹಯೋಗದಲ್ಲಿ ಕೇಂದ್ರ ಸರ್ಕಾರದ ಇ – ಶ್ರಮ ಕಾರ್ಮಿಕ ಕಾರ್ಡ್ ನೋಂದಾವಣಿ ಕಾರ್ಯಕ್ರಮ ಹಾಗೂ ಸ್ಥಳದಲ್ಲೇ ಕಾರ್ಡ್ ವಿತರಣೆ ಕಾರ್ಯಕ್ರಮವು ಸಾಣೂರು ಸುವರ್ಣ ಗ್ರಾಮ ಸೌಧದಲ್ಲಿ ನಡೆಯಿತು.
ಕೇಂದ್ರ ಸರ್ಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಕೆಲಸ ಪಕ್ಷ ಹಾಗೂ ಕಾರ್ಯಕರ್ತರದ್ದು ಎಂದು ರಾಜ್ಯ ಬಿಜೆಪಿ ಪಂ.ರಾಜ್ ಆಡಳಿತ ಮಂಡಳಿ ಸದಸ್ಯ ಕೆ.ಎಂ.ಎಫ್ ನಿರ್ದೇಶಕ ಸಾಣೂರು ನರಸಿಂಹ ಕಾಮತ್ ತಿಳಿಸಿದರು.
ಕಾರ್ಯಕ್ರಮವನ್ನು ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಯುವರಾಜ್ ಜೈನ್ ಉದ್ಘಾಟಸಿದರು. ವೇದಿಕೆಯಲ್ಲಿ ಮಾಜಿ ತಾ.ಪಂ. ಸದಸ್ಯ ಪ್ರವೀಣ್ ಕೋಟ್ಯಾನ್, ಸಾಣೂರು ಗ್ರಾ.ಪಂ.ಅಧ್ಯಕ್ಷೆ ಸುಜಾತ ಶೆಟ್ಟಿ, ಉಪಾಧ್ಯಕ್ಷ ಪ್ರಸಾದ್ ಪೂಜಾರಿ, ಬಿಜೆಪಿ ನಿಟ್ಟೆ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಕರುಣಾಕರ್ ಎಸ್ ಕೋಟ್ಯಾನ್, ಪಂ. ಸದಸ್ಯೆ ಸುಮತಿ ಪೂಜಾರಿ, ಪ್ರಮೀಳಾ ಪೂಜಾರಿ, ಸುನಂದ ನಾಯ್ಕ್, ಸರಸ್ವತಿ ಆಚಾರ್ಯ, ನಿಟ್ಟೆ ಶಕ್ತಿ ಕೇಂದ್ರ ಯುವಮೋರ್ಚಾ ಅಧ್ಯಕ್ಷ ರಾಕೇಶ್ ಅಮೀನ್, ದಿಶಾನಿ ಸಂಸ್ಥೆಯ ಗಣೇಶ್, ಯೂಥ್ ಫಾರ್ ಸೇವಾ ಸಂಸ್ಥೆಯ ಉಡುಪಿ ಜಿಲ್ಲಾ ಸಂಚಾಲಕಿ ರಮಿತ ಶೈಲೆಂದ್ರ ಉಪಸ್ಥಿತರಿದ್ದರು.
ಯೂಥ್ ಫಾರ್ ಸೇವಾ ಸಂಸ್ಥೆಯ ಉಡುಪಿ ಜಿಲ್ಲಾ ಸಂಚಾಲಕಿ ರಮಿತ ಶೈಲೆಂದ್ರ ಪ್ರಸ್ತಾವಿಕ ಗೈದರು. ಬಿಜೆಪಿ ಗ್ರಾಮ ಸಮಿತಿ ಪ್ರಧಾನ ಕಾರ್ಯದರ್ಶಿ ಮೋಹನ್ ಶೆಟ್ಟಿ ಸ್ವಾಗತಿಸಿ ವಂದಿಸಿದರು.