Sunday, June 8, 2025

ಹಿಜಾಬ್ ವಿವಾದವು ಬಿಜೆಪಿ ಸರ್ಕಾರದ ಪೂರ್ವನಿಯೋಜಿತ ಯೋಜನೆ: ಅಬ್ದುಲ್ ಮಜೀದ್

ಮಂಗಳೂರು: ಹಿಜಾಬ್ ವಿವಾದವು ಬಿಜೆಪಿ ಸರ್ಕಾರದ ಪೂರ್ವನಿಯೋಜಿತ ಯೋಜನೆ. ಸರ್ಕಾರ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮೂಲಕ ಬಲಪ್ರಯೋಗ ಮಾಡುತ್ತಿದೆ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮಂಗಳೂರಿನಲ್ಲಿ ಹೇಳಿದ್ದಾರೆ.

ಬಲವಂತವಾಗಿ ಹಿಜಾಬ್ ಕಳಚುವುದು, ಶಿಕ್ಷಕರ ಹಿಜಾಬ್ ಕೂಡ ತೆಗೆಸೋ ಕೆಲಸ ಮಾಡುತ್ತಿದೆ. ಗೃಹ ಮತ್ತು ಶಿಕ್ಷಣ ಇಲಾಖೆ ಕೋರ್ಟ್ ಆದೇಶವಷ್ಟೇ ಪಾಲಿಸಬೇಕು. ಅದು ಬಿಟ್ಟು ‌ಆದೇಶ ಅನ್ವಯವಾಗದ ಕಾಲೇಜುಗಳ ಮೇಲೆ ಹೇರಬಾರದು. ಒಂದು ವೇಳೆ ಹೀಗೆ ಮಾಡಿದಲ್ಲಿ ಮುಂದಿನ ದಿನಗಳಲ್ಲಿ ಶಿಕ್ಷಣಾಧಿಕಾರಿಗಳ ಮೇಲೆ‌ ನ್ಯಾಯಾಂಗ ನಿಂದನೆ ದೂರು ದಾಖಲಿಸುತ್ತೇವೆ. ಕಾಂಗ್ರೆಸ್ ಪಕ್ಷದಲ್ಲಿ ಇಬ್ಬಾಗ ನೀತಿಯಿದ್ದು, ಕಾಂಗ್ರೆಸ್ ತನ್ನ ನಿಲುವು ಸ್ಪಷ್ಟೀಕರಿಸಬೇಕು. ಕಾಂಗ್ರೆಸ್‌ಗೆ ಮುಸ್ಲಿಂರ ಮತ ಬೇಕು, ಅವರ ಜ್ಬಲಂತ ಸಮಸ್ಯೆ ಬೇಡ. ಡಿಕೆ ಶಿವಕುಮಾರ್ ಮುಖಂಡರಿಗೆ ಹಿಜಾಬ್ ಬಗ್ಗೆ ಮಾತನಾಡದಂತೆ ಹೇಳುತ್ತಾರೆ. ಡಿಕೆಶಿ ಸಾಫ್ಟ್ ಹಿಂದುತ್ವದ ಮೂಲಕ ತಮ್ಮ ‌ಸಮಾಧಿ ತಾವೇ ತೋಡಿಕೊಳ್ಳುತ್ತಿದ್ದಾರೆ. ಆದರೆ ಅಸೆಂಬ್ಲಿಯಲ್ಲಿ ಈ ವಿಚಾರವೆತ್ತಲು ಗೊಂದಲದಲ್ಲಿರುವುದು ಈ ರಾಜ್ಯದ ದುರಂತ. ಪ್ರತಿಪಕ್ಷಗಳು ಕಲಾಪದಲ್ಲಿ ಈ ಜ್ವಲಂತ ಸಮಸ್ಯೆಗಳ ಬಗ್ಗೆ ಧ್ಬನಿ ಎತ್ತಬೇಕು. ಎಸ್‌ಡಿಪಿಐಗೆ ವಿದ್ಯಾರ್ಥಿಗಳ ಬದುಕಿನ ಜೊತೆ ಚೆಲ್ಲಾಟದ ರಾಜಕಾರಣವಾಡುವ ಗತಿ ಬಂದಿಲ್ಲ. ನಾವು ಈ ವಿಚಾರದಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್‌ನ್ನು ಚರ್ಚೆಗೆ ಕರೆಯುತ್ತೇವೆ. ನಾವು ನಾಡಿನ ಜನರ ಸಂವಿಧಾನದ ಹಕ್ಕುಗಳನ್ನು ಉಳಿಸಲು ಹೋರಾಟ ‌ಮಾಡುತ್ತೇವೆ. ಮಂಗಳೂರಿನ ಜನತೆ ಪ್ರಬುದ್ಧರಾಗ್ತಿದಾರೆ, ಹಾಗಾಗಿ ಇಲ್ಲಿ ಹಿಜಾಬ್ ವಿವಾದ ಇಲ್ಲ. ಅದಕ್ಕೆ ಖುಷಿ ಪಡಬೇಕು. ಎಸ್‌ಡಿಪಿಐ ಬ್ಯಾನ್ ಆದರೂ ನಾವು ಸಂವಿಧಾನದ ಪರ ಇರೋ ಪಕ್ಷ ಎಂದು ಅಬ್ದುಲ್ ಮಜೀದ್ ಹೇಳಿಕೆ ನೀಡಿದ್ದಾರೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles