Sunday, June 8, 2025

ಮಳಲಿ ಮಸೀದಿಯಲ್ಲಿ ಶಿವ, ದುರ್ಗೆ, ಸ್ಕಂದನ ಸಾನಿಧ್ಯ ಇರುವುದು ಗೋಚರ: ರಾಜಶೇಖರಾನಂದ ಸ್ವಾಮೀಜಿ

ಮಂಗಳೂರು: ಮಳಲಿಯಲ್ಲಿ ಮಸೀದ ಇದ್ದ ಜಾಗದಲ್ಲಿ ತಾಂಬೂಲ ಪ್ರಶ್ನೆ ಇಟ್ಟಾಗ ದೇವರು ಇರುವುದು ನಿಜ ಎನ್ನುವುದು ಧೃಢವಾಗಿದೆ. ಈ ಕುರಿತು ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿದ್ದು, ಇಲ್ಲಿ ದೈವಿ ಸಾನಿಧ್ಯ ಇರುವುದು ಸ್ಪಷ್ಟವಾದ ಹಿನ್ನೆಲೆ ಇದನ್ನ ನಾವು ಹೇಗೆ ವೃದ್ಧಿ ಮಾಡಬೇಕು ಎನ್ನುವುದರ ಕಡೆಗೆ ಗಮನ ಹರಿಸಬೇಕಾಗಿದೆ ಎಂದು ಹೇಳಿದ್ದಾರೆ.
ಹೌದು, ಮಳಲಿ ಮಸೀದಿ ಇದ್ದ ಜಾಗದಲ್ಲಿ ದೇವಸ್ಥಾನ ಇರುವುದು ತಾಂಬೂಲ ಪ್ರಶ್ನೆಯಲ್ಲಿ ಸ್ಪಪಷ್ಟವಾಗಿದೆ. ಈ ಬಗ್ಗೆ ಅನೇಕರಿಂದ ಹಲವು ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಇದೀಗ ಹಿ ಮಠದ ರಾಜಶೇಖರಾನಂದ ಸ್ವಾಮೀಜಿಗಳು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಸಾನಿಧ್ಯವನ್ನು ಹೇಗೆ ಮುಂದಕ್ಕೆ ನಮಗೆ ಒದಗಿ ಬರುತ್ತದೆ ಎಂದು ಚಿಂತನೆ ನಡೆಸಿದಾಗ ಬಹಳ ಸ್ಪುಟವಾಗಿ ಸಾನಿಧ್ಯ ಇರುವುದು ನಮಗೆ ಕಂಡುಬAದಿದೆ. ಈ ಹಿನ್ನೆಲೆ ನಾವು ಈಗ ಗಮನಿಸಬೇಕಾಗಿರುವುದು ಇದನ್ನ ಇನ್ನು ನಾವು ಹೇಗೆ ವೃದ್ಧಿ ಮಾಡಿಕೊಂಡು ಅದಕ್ಕೆ ಪೂರಕವಾದ ವ್ಯವಸ್ಥೆಯನ್ನು ಮಾಡಿಕೊಂಡು ಹೋಗಬೇಕು ಎನ್ನುವುದು. ಅದು ಭಜನೆಯಾಗಿರಬುದು, ದೀಪ ನಮಸ್ಕಾರವಾಗಿರಬಹುದು, ಮತ್ತು ಅದಕ್ಕೆ ಇರುವ ವಿಘ್ನಗಳ ನಿವಾರಣೆ ಮಾಡುವ ಹಿನ್ನೆಲೆ ಗಣಪತಿ ಪೂಜೆ ಮಾಡಡುತ್ತೇವೆ ಎಂದಿದ್ದಾರೆ.
ಇಲ್ಲಿ ಶಿವನ ಸಾನಿಧ್ಯ ಹಾಗೂ ಇಲ್ಲಿ ವಾದಿರಾಜ ಗುರು ಸಾರ್ವಭೌಮರು ತಪಸ್ವಿಗಳಾಗಿ ಈ ಮಣ್ಣಿನಲ್ಲಿ ಓಡಾಟ ಮಾಡಿದ್ದರ ಫಲವಾಗಿ ಇಲ್ಲಿ ದುರ್ಗೆಯ ಸಾನಿಧ್ಯ ಹಾಗೂ ಸ್ಕಂಧನ ಸಾನಿಧ್ಯ ಎನ್ನುವುದು ಸ್ಪಟವಾಗಿ ಬಂದಿದೆ ಎಂದು ಹೇಳಿದ್ದಾರೆ. ಇನ್ನು ಬಹಳ ಮುಖ್ಯವಾಗಿ ಈ ವಿಚಾರ ಮಸಿದಿಗೆ ಸಂಬಂಧಪಟ್ಟವರಿಗೂ ಮಾಧ್ಯಮದ ಮೂಲಕ ತಿಳಿದಿದ್ದು ಅವರು ಒಳ್ಳೆಯ ಮನಸ್ಸಿನಿಂದ ಬಿಟ್ಟುಕೊಡುತ್ತಾರೆ ಎಂದು ನಂಬಿದ್ದೇನೆ ಎಂದು ಹೇಳಿದ್ದಾರೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles