ಮಂಗಳೂರು: ಇಡೀ ವಿಶ್ವದಲ್ಲೆ ದೇಶದ ನಾಗರಿಕರನ್ನು ಏರ್ ಲಿಫ್ಟ್ ಮಾಡಿದ ಪ್ರಥಮ ದೇಶ ಭಾರತ. ಇಂತಹ ಕಾರ್ಯಚರಣೆ ಬೇರೆ ಯಾವ ದೇಶವೂ ಮಾಡಿಲ್ಲ. ಇದನ್ನು ಗಮನಿಸದೆ ವಿರೋಧ ಮಾಡಬೇಕೆಂದು ಈ ರೀತಿ ಮಾತನಾಡಲಾಗುತ್ತಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರಿಗೆ ಮಾಹಿತಿ ಕೊರತೆಯಿದೆ. ಅವರ ಹೇಳಿಕೆಯನ್ನು ಖಂಡಿಸುತ್ತೇನೆ ಎಂದು ಸಚಿವ ಅಶ್ವತ್ಥ ನಾರಾಯಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏರ್ ಲಿಫ್ಟ್ ಮಾಡುವಲ್ಲಿ ಸರ್ಕಾರ ವಿಫಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಮಂಗಳೂರಿನಲ್ಲಿ ಗುರುವಾರ ಪ್ರತಿಕ್ರಿಯೆ ನೀಡಿದ ಅವರು ಪ್ರಧಾನಿ ನಾಲ್ಕೂ ಸಚಿವರನ್ನು ಆ ದೇಶಕ್ಕೆ ಕಳುಹಿಸಿ ಸವಾಲಿನ ರೀತಿ ಕೆಲಸ ಮಾಡುತ್ತಿದ್ದಾರೆ. ನಮ್ಮ ದೇಶದಲ್ಲಿ ಶಿಕ್ಷಣಕ್ಕೆ ಯಾವುದೇ ಕೊರತೆಯಿಲ್ಲ. ಸದ್ಯ ರಕ್ಷಣಾ ಕಾರ್ಯಾಚರಣೆಗೆ ನಮ್ಮ ಮೊದಲ ಆದತ್ಯೆ. ಕರ್ನಾಟಕದಲ್ಲಿ ಎಷ್ಟು ಕಾಲೇಜ್ ಇದೆ ಎಷ್ಟು ಉಚಿತ ಸೀಟ್ ಇದೆ ಎಂಬುದು ನಿಮಗೆ ಗೊತ್ತಿದೆ. ಆದರೆ ಪ್ರತಿಯೊಬ್ಬರನ್ನು ವೈದ್ಯರನ್ನಾಗಿಸಲು ಸಾಧ್ಯವಿಲ್ಲ. ಡಿಮ್ಯಾಂಡ್ ಗಿಂತ ಸಪ್ಲೈ ಜಾಸ್ತಿ ಇದೆ. ಭಾರತದಲ್ಲಿ ಕೊರತೆಯಿರಬಹುದು ಆದರೆ ಕರ್ನಾಟಕದಲ್ಲಿ ಸಾಕಷ್ಟು ವೈದ್ಯರಿದ್ದಾರೆ. ಇಂತಹ ಭಾವನಾತ್ಮಕ ಸಂದರ್ಭದಲ್ಲಿ ಈ ರೀತಿ ಚರ್ಚೆ ಮಾಡೋದು ಸರಿಯಲ್ಲ ಎಂದರು.