ಕಾರ್ಕಳ : ಮಹಿಳೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಯೋರ್ವ ಮಹಿಳೆಯ ಕುತ್ತಿಗೆ ಕೈಹಾಕಿ ಸರ ಎಗರಿಸಲು ಯತ್ನಿಸಿ ವಿಫಲವಾದ ಘಟನೆ ಪುರಸಭೆ ವ್ಯಾಪ್ತಿಯ ಅನಂತಶಯನ ಎಂಬಲ್ಲಿ ಬುಧವಾರ ನಡೆದಿದೆ.
ಮಹಿಳೆ ಕಾರ್ಕಳ ತೆಳ್ಳಾರು ನಿವಾಸಿಯಾಗಿದ್ದು ಅನಂತ ಶಯನ ವೇಣುಗೋಪಾಲ ದೇವಸ್ಥಾನದ ಸಮೀಪದಲ್ಲಿ ಮಹಿಳೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಮಹಿಳೆ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಲು ಯತ್ನಿಸಿದ್ದು, ಈ ವೇಳೆ ಮಹಿಳೆ ಸರಗಳ್ಳನನ್ನು ತಳ್ಳಿದ್ದಾರೆ. ಈ ವೇಳೆ ಸಾರ್ವಜನಿಕರು ಜಮಾಯಿಸುವ ಮುನ್ನ ಕಳ್ಳ ಪರಾರಿಯಾಗಿದ್ದಾನೆ. ಇದೀಗ ಈ ವಿಚಾರ ಊರೆಲ್ಲಾ ಹಬ್ಬಿದ್ದು ಪೊಲೀಸರು ಆರೋಪಿ ಪತ್ತೆಗಾಗಿ ತಲೆ ಕೆಡಿಸಿಕೊಂಡಿವುದು ತಿಳಿದು ಬಂದಿದೆ.
ಹಾಡುಹಗಲೇ ಮಹಿಳೆ ಕುತ್ತಿಗೆಯಿಂದ ಸರ ಎಗರಿಸಲು ಯತ್ನ : ಆರೋಪಿ ಪರಾರಿ ಪೊಲೀಸರಿಂದ ಆರೋಪಿ ಪತ್ತೆಗಾಗಿ ಶೋಧ
Subscribe
Login
0 Comments