Sunday, June 8, 2025

ಹಾಡುಹಗಲೇ ಮಹಿಳೆ ಕುತ್ತಿಗೆಯಿಂದ ಸರ ಎಗರಿಸಲು ಯತ್ನ : ಆರೋಪಿ ಪರಾರಿ ಪೊಲೀಸರಿಂದ ಆರೋಪಿ  ಪತ್ತೆಗಾಗಿ ಶೋಧ

ಕಾರ್ಕಳ : ಮಹಿಳೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಯೋರ್ವ ಮಹಿಳೆಯ ಕುತ್ತಿಗೆ ಕೈಹಾಕಿ ಸರ ಎಗರಿಸಲು ಯತ್ನಿಸಿ  ವಿಫಲವಾದ ಘಟನೆ  ಪುರಸಭೆ ವ್ಯಾಪ್ತಿಯ ಅನಂತಶಯನ ಎಂಬಲ್ಲಿ ಬುಧವಾರ ನಡೆದಿದೆ.
ಮಹಿಳೆ ಕಾರ್ಕಳ ತೆಳ್ಳಾರು ನಿವಾಸಿಯಾಗಿದ್ದು ಅನಂತ ಶಯನ ವೇಣುಗೋಪಾಲ ದೇವಸ್ಥಾನದ ಸಮೀಪದಲ್ಲಿ  ಮಹಿಳೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಮಹಿಳೆ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಲು ಯತ್ನಿಸಿದ್ದು, ಈ ವೇಳೆ ಮಹಿಳೆ ಸರಗಳ್ಳನನ್ನು ತಳ್ಳಿದ್ದಾರೆ. ಈ ವೇಳೆ ಸಾರ್ವಜನಿಕರು ಜಮಾಯಿಸುವ ಮುನ್ನ ಕಳ್ಳ ಪರಾರಿಯಾಗಿದ್ದಾನೆ. ಇದೀಗ ಈ ವಿಚಾರ ಊರೆಲ್ಲಾ ಹಬ್ಬಿದ್ದು ಪೊಲೀಸರು ಆರೋಪಿ ಪತ್ತೆಗಾಗಿ ತಲೆ ಕೆಡಿಸಿಕೊಂಡಿವುದು ತಿಳಿದು ಬಂದಿದೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles