ಉಡುಪಿ: ಉಡುಪಿ ಎಂದಾಕ್ಷಣ ನೆನಪಾಗುವುದು ಶ್ರೀಕೃಷ್ಣಮಠ ಹಾಗೂ ಎರಡು ವರ್ಷಕ್ಕೊಮ್ಮೆ ನಡೆಯುವ ಅಲ್ಲಿ ನಡೆಯುವ ಪರ್ಯಾಯ ಮಹೋತ್ಸವ. ಈ ಬಾರಿ ಜನವರಿ 17 ರ ರಾತ್ರಿ ಇಂದ ಜನವರಿ 18 ರ ಬೆಳಿಗ್ಗೆಯ ವರೆಗೆ ಪರ್ಯಾಯ ಮಹೋತ್ಸವ ನಡೆಯಲಿದೆ.
ಕೊರೋನಾ ನಡುವೆಯೂ, ಜಿಲ್ಲಾಡಳಿತದ ಮಾರ್ಗಸೂಚಿಯನ್ನು ಅನುಸರಿಸಿ ಈ ಬಾರಿಯ ಪರ್ಯಾಯ ನಡೆಯಲಿದೆ. ಉಡುಪಿಯ ರಸ್ತೆಗಳಲ್ಲಿ, ಸ್ವಾಗತ ಗೋಪುರಗಳಲ್ಲಿ ಹಾಗೂ ಕೃಷ್ಣ ಮಠಗಳಿಗೆ ಸುಣ್ಣ ಬಣ್ಣ ಬಳಿದು ಸಿಂಗಾರ ಮಾಡುವ ಮೂಲಕ ಪರ್ಯಾಯಕ್ಕೆ ಭಾರೀ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಮಠ ಪರಂಪರೆಯಲ್ಲಿ ಪರ್ಯಾಯ ಮಹೋತ್ಸವಕ್ಕೆ ವಿಶೇಷ ಸ್ಥಾನವಿದ್ದು, ಈ ಬಾರಿ ಅದಮಾರು ಈಶ ಪ್ರಿಯ ಶ್ರೀಗಳ ಪರ್ಯಾಯ ಕೊನೆಯಾಗುತ್ತಿದೆ. ತದನಂತರ ಕೃಷ್ಣಾಪುರ ಮಠದ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥರು ಪರ್ಯಾಯಕ್ಕೆ ಕುಳಿತುಕೊಳ್ಳಲಿದ್ದಾರೆ.
ಶ್ರೀಕೃಷ್ಣ ಮಠದ ಪರ್ಯಾಯಕ್ಕೆ ಊರ ಪರವೂರ ಸಾವಿರಾರು ಮಂದಿ ಭಕ್ತಾದಿಗಳು ಆಗಮಿಸಿ ಶ್ರೀಕೃಷ್ಣನ ಕೃಪೆಗೆ ಪಾತ್ರರಾಗುತ್ತಿದ್ದರು. ಆದರೆ ಈ ಬಾರಿ ಕೋವಿಡ್ ಇರುವುದರಿಂದ ಹೆಚ್ಚು ಜನ ಸೇರುವ ಹಾಗೆ ಇಲ್ಲ. ಜಿಲ್ಲಾಡಳಿತದ ಮಾರ್ಗಸೂಚಿಯನ್ನು ಅನುಸರಿಸಿ ಪರ್ಯಾಯ ಮಹೋತ್ಸವ ನಡೆಸುವುದು ದೊಡ್ಡ ಸವಾಲಾಗಿದೆ. ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಿ ಸರಳ ರೀತಿಯಲ್ಲಿ ಪರ್ಯಾಯ ನಡೆಸುವ ಕುರಿತು ಚಿಂತನೆಗಳು ನಡೆಯುತ್ತಿವೆ.