Sunday, June 8, 2025

ಕೋವಿಡ್ ನಡುವೆ ಸರಳವಾಗಿ ನಡೆಯಲಿರುವ ಈ ಬಾರಿಯ ಪರ್ಯಾಯ ಮಹೋತ್ಸವ

ಉಡುಪಿ: ಉಡುಪಿ ಎಂದಾಕ್ಷಣ ನೆನಪಾಗುವುದು ಶ್ರೀಕೃಷ್ಣಮಠ ಹಾಗೂ ಎರಡು ವರ್ಷಕ್ಕೊಮ್ಮೆ ನಡೆಯುವ ಅಲ್ಲಿ ನಡೆಯುವ ಪರ್ಯಾಯ ಮಹೋತ್ಸವ. ಈ ಬಾರಿ ಜನವರಿ 17 ರ ರಾತ್ರಿ ಇಂದ ಜನವರಿ 18 ರ ಬೆಳಿಗ್ಗೆಯ ವರೆಗೆ ಪರ್ಯಾಯ ಮಹೋತ್ಸವ ನಡೆಯಲಿದೆ.

ಕೊರೋನಾ ನಡುವೆಯೂ, ಜಿಲ್ಲಾಡಳಿತದ ಮಾರ್ಗಸೂಚಿಯನ್ನು ಅನುಸರಿಸಿ ಈ ಬಾರಿಯ ಪರ್ಯಾಯ ನಡೆಯಲಿದೆ. ಉಡುಪಿಯ ರಸ್ತೆಗಳಲ್ಲಿ, ಸ್ವಾಗತ ಗೋಪುರಗಳಲ್ಲಿ ಹಾಗೂ ಕೃಷ್ಣ ಮಠಗಳಿಗೆ ಸುಣ್ಣ ಬಣ್ಣ ಬಳಿದು ಸಿಂಗಾರ ಮಾಡುವ ಮೂಲಕ ಪರ್ಯಾಯಕ್ಕೆ ಭಾರೀ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಮಠ ಪರಂಪರೆಯಲ್ಲಿ ಪರ್ಯಾಯ ಮಹೋತ್ಸವಕ್ಕೆ ವಿಶೇಷ ಸ್ಥಾನವಿದ್ದು, ಈ ಬಾರಿ ಅದಮಾರು ಈಶ ಪ್ರಿಯ ಶ್ರೀಗಳ ಪರ್ಯಾಯ ಕೊನೆಯಾಗುತ್ತಿದೆ. ತದನಂತರ ಕೃಷ್ಣಾಪುರ ಮಠದ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥರು ಪರ್ಯಾಯಕ್ಕೆ ಕುಳಿತುಕೊಳ್ಳಲಿದ್ದಾರೆ.

ಶ್ರೀಕೃಷ್ಣ ಮಠದ ಪರ್ಯಾಯಕ್ಕೆ ಊರ ಪರವೂರ ಸಾವಿರಾರು ಮಂದಿ ಭಕ್ತಾದಿಗಳು ಆಗಮಿಸಿ ಶ್ರೀಕೃಷ್ಣನ ಕೃಪೆಗೆ ಪಾತ್ರರಾಗುತ್ತಿದ್ದರು. ಆದರೆ ಈ ಬಾರಿ ಕೋವಿಡ್ ಇರುವುದರಿಂದ ಹೆಚ್ಚು ಜನ ಸೇರುವ ಹಾಗೆ ಇಲ್ಲ. ಜಿಲ್ಲಾಡಳಿತದ ಮಾರ್ಗಸೂಚಿಯನ್ನು ಅನುಸರಿಸಿ ಪರ್ಯಾಯ ಮಹೋತ್ಸವ ನಡೆಸುವುದು ದೊಡ್ಡ ಸವಾಲಾಗಿದೆ. ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಿ ಸರಳ ರೀತಿಯಲ್ಲಿ ಪರ್ಯಾಯ ನಡೆಸುವ ಕುರಿತು ಚಿಂತನೆಗಳು ನಡೆಯುತ್ತಿವೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles