Sunday, June 8, 2025

ಉಡುಪಿ: ಸರ್ಕಾರದ ನಡೆ ಗ್ರಾಮದೆಡೆ ಕಾರ್ಯಕ್ರಮ

ಬ್ರಹ್ಮಾವರ: ಗ್ರಾಮವಾಸ್ತವ್ಯ ಕಾರ್ಯಕ್ರಮದ ಪ್ರಯುಕ್ತ ಕಂದಾಯ ಸಚಿವ ಆರ್‌.ಅಶೋಕ್, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಹಾಗೂ ಶಾಸಕ ರಘುಪತಿ ಭಟ್ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿಗೆ ಭಾನುವಾರ ಭೇಟಿ ನೀಡಿದರು.

ಸಚಿವ ಆರ್‌.ಅಶೋಕ್ ಅವರು ಸರ್ಕಾರದ ವಿವಿಧ ಸವಲತ್ತುಗಳ ವಿತರಣೆ, ಮೂವರು ಮಹಿಳೆಯರಿಗೆ ಹಸುಗಳ ವಿತರಣೆ, ವಿಕಲಚೇತನರಿಗೆ ಕೃತಕ ಕಾಲು ಜೋಡಣೆ, ಕೃಷಿ ವಸ್ತು ಪ್ರದರ್ಶನ ವೀಕ್ಷಣೆ, ವಿವಿಧ ಇಲಾಖೆಗಳ ಸ್ಟಾಲ್ ಪರಿಶೀಲನೆ ನಡೆಸಿದರೆ.

ಕೊಕ್ಕರ್ಣೆ ಗ್ರಾ.ಪಂ. ವತಿಯಿಂದ ಆರ್.ಅಶೋಕ್‌ಗೆ ಸನ್ಮಾನ

ಸನ್ಮಾನ ಸ್ವೀಕರಿಸಿ ಮಾತನಾಡಿದ ಆರ್.ಅಶೋಕ್ ಮಂತ್ರಿಗಳಿಗೆ ಹಾಗೂ ಅಧಿಕಾರಿಗಳಿಗೆ ಹಳ್ಳಿಗೆ ಬಂದಾಗ ಜನರ ಸಮಸ್ಯೆಗಳು ಅರ್ಥವಾಗುತ್ತದೆ. ಇಡೀ ರಾಜ್ಯದಲ್ಲಿ ಇಂದು 247 ಕಡೆ ಈ ಕಾರ್ಯಕ್ರಮವಾಗುತ್ತಿದೆ. ಎಲ್ಲಾ ಸಮಸ್ಯೆಗಳು ಪರಿಹಾರವಾಗಬೇಕೆಂದು ಸೂಚನೆ ನೀಡಿದ್ದೇನೆ. ಕ್ಷೇತ್ರದ 1437 ಫಲಾನುಭವಿಗಳಿಗೆ ಸವಲತ್ತು ವಿತರಣೆ ಮಾಡುತ್ತಿದ್ದೇವೆ. 60 ವರ್ಷವಾದವರಿಗೆ ಮನೆ ಬಾಗಿಲಿಗೆ ಪಿಂಚಣಿ, ಸಣ್ಣ ಮನೆ ಕಟ್ಟುವವರಿಗೆ ಭೂ ಪರಿವರ್ತನೆಗೆ ಅವಕಾಶ, ರಾಜ್ಯದಾದ್ಯಂತ ಕಡತಗಳ ವಿಲೇವಾರಿಗೆ ಸೂಚನೆ ನೀಡುತ್ತೇನೆ ಎಂದರು.

ಒಳಬೈಲು ಹಳ್ಳಿಗೆ ಸಚಿವ ಆರ್ ಅಶೋಕ್ ಭೇಟಿ

ಸಚಿವ ಆರ್.ಅಶೋಕ್ ಪರಿಶಿಷ್ಟ ಪಂಗಡದ ಕುಡುಬಿ ಜನಾಂಗದ ಮೂಲ ಮನೆಗೆ ಭೇಟಿ ನೀಡಿ ಕುಡುಬಿ ಸಮುದಾಯದ ಅಹವಾಲು ಸ್ವೀಕರಿಸಿ, ಬೇಸಾಯದ ಸಾಂಪ್ರದಾಯಿಕ ಉಪಕರಣಗಳ ಪರಿಶೀಲನೆ ನಡೆಸಿದರು.

ಈ ಸಂದರ್ಭ ಶಾಸಕ ರಘುಪತಿ ಭಟ್, ಡಿಸಿ ಕೂರ್ಮ ರಾವ್, ಸಿಒಓ, ಜಿಲ್ಲಾಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles