ಉಳ್ಳಾಲ: ಬೃಹತ್ ತೊಟ್ಟಿಲು ತುಂಡಾಗಿ ನಾಲ್ಕು ಮಂದಿ ಗಾಯಗೊಂಡ ಘಟನೆ ಉಳ್ಳಾಲದಲ್ಲಿ ನಡೆಯುತ್ತಿರುವ ಉರೂಸ್ ಕಾರ್ಯಕ್ರಮದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.
ಉರೂಸ್ ಪ್ರಯುಕ್ತ ದರ್ಗಾ ದರ್ಶನಕ್ಕೆಂದು ಬಂದಿದ್ದ ಕೇರಳ ಮೂಲ ಕುಟುಂಬದ ನಾಲ್ಕು ಜನರು ಸಂತೆಯಲ್ಲಿದ್ದ ಬೃಹತ್ ತೊಟ್ಟಿಲಿನಲ್ಲಿ ಕುಳಿತಿದ್ದು, ಏಕಾಏಕಿ ವೀಲ್ ಜಾಯಿಂಟ್ ತಪ್ಪಿ ತೊಟ್ಟಿಲಿನಲ್ಲಿದ್ದವರು ಕೆಳಕ್ಕೆ ಬಿದ್ದು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.