ಕಾರ್ಕಳ : ಕರಾವಳಿಯ ಜಿಲ್ಲೆಗಳಾದ ಕಾರ್ಕಳ ಮತ್ತು ಬಂಟ್ವಾಳದಲ್ಲಿ ಉ.ಪ್ರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬೃಹತ್ ರೋಡ್ ನಡೆಸಿದರು. ಸುಮಾರು 15 ಸಾವಿರಕ್ಕೂ ಅಧಿಕ ಮಂದಿ ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಅವರನ್ನು ಸ್ವಾಗತಿಸಿ, ರೋಡ್ ಶೋದಲ್ಲಿ ಪಾಲ್ಗೊಂಡರು.ಬಜರಂಗದಳದ ಸುದ್ದಿಗೇನಾದರೂ ಕಾಂಗ್ರೆಸ್ ಕೈ ಹಾಕಿದಲ್ಲಿ ಸಹಿಸುವ ಮಾತೇ ಇಲ್ಲ. ಬಜರಂಗದಳ ನಿಶೇಧ ಕುರಿತು ಕಾಂಗ್ರೆಸ್ ಯೋಚಿಸಿದ್ದು, ಅಂಥದ್ದೇನಾದರೂ ನಡೆಯದಂತೆ ಬಿಜೆಪಿಯನ್ನೇ ಜನರು ಆಯ್ಕೆ ಮಾಡಬೇಕು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.