Thursday, June 19, 2025

ಹರ್ಷ ಹತ್ಯೆ ಮಾಡಿರುವ ಆರೋಪಿಗಳನ್ನು ಎನ್‌ಕೌಂಟರ್ ಮಾಡಬೇಕು: ಬಜರಂಗದಳದ ಪ್ರಾಂತೀಯ ಸಂಚಾಲಕ ಸುನಿಲ್.ಕೆ.ಆರ್

ಮೂಡುಬಿದಿರೆ: ಶಿವಮೊಗ್ಗದಲ್ಲಿ ಬಜರಂಗದಳದ ಕಾರ್ಯಕರ್ತ ಹರ್ಷ ಅವರನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿರುವ ಆರೋಪಿಗಳನ್ನು ಪೊಲೀಸರು ಎನ್‌ಕೌಂಟರ್ ಮಾಡಬೇಕೆಂದು ಬಜರಂಗದಳದ ಪ್ರಾಂತೀಯ ಸಂಚಾಲಕ ಸುನಿಲ್.ಕೆ.ಆರ್ ಆಗ್ರಹಿಸಿದ್ದಾರೆ.

ಅವರು ಶಿವಮೊಗ್ಗದಲ್ಲಿ ನಡೆದ ಬಜರಂಗದಳದ ಕಾರ್ಯಕರ್ತ ಹರ್ಷ ಕೊಲೆಯನ್ನು ಖಂಡಿಸಿ ಮೂಡುಬಿದಿರೆ ಪ್ರಖಂಡದ ವಿ.ಹಿಂ.ಪ. ಬಜರಂಗದಳದ ವತಿಯಿಂದ ಮೂಡುಬಿದರೆ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದಲ್ಲಿ ಮಂಗಳವಾರ ಸಂಜೆ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಅಂದಿನ ಕಾಲದಲ್ಲಿ ಬಜರಂಗಿಗಳು ರಾಮನಿಗಾಗಿ ಎಲ್ಲವನ್ನು ಎದುರಿಸಿದರು. ಇವತ್ತಿನ ಬಜರಂಗಿಗಳು ದೇಶಕ್ಕಾಗಿ, ಧರ್ಮಕ್ಕಾಗಿ, ತಾಯಿ ಭಾರತಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗಿದ್ದೇವೆ. ಎಷ್ಟೇ ತಿಂಗಳು ಅಥವಾ ವರ್ಷಗಳು ಉರುಳಬಹುದು ಆದರೆ ಪ್ರತಿಕಾರವನ್ನು ಖಂಡಿತಾ ತೀರಿಸುತ್ತೇವೆ. ಯಾವುದೇ ವಿರೋಧಗಳು ವ್ಯಕ್ತವಾದರೂ ನಾವು ರಾಜಾರೋಷವಾಗಿ ಎದುರಿಸುತ್ತೇವೆ. ಬೆದರಿಕೆಗೆ ನಾವು ಜಗ್ಗುವವರಲ್ಲ. ಹಿಂದೂ ಸಮಾಜ, ಸಂಘಟನೆ, ಕಾರ್ಯಕರ್ತರನ್ನು ಮತ್ತು ಅವರು ಮಾಡುವ ಕೆಲಸಗಳನ್ನು ಕುಗ್ಗಿಸಲು ನಿಮ್ಮಿಂದ ಸಾಧ್ಯವಿಲ್ಲ ಎಂದರು.

ವಿ.ಹಿಂ.ಪ. ವಿಭಾಗದ ಸಹ ಕಾರ್ಯದರ್ಶಿ ದೇವಿ ಪ್ರಸಾದ್ ಶೆಟ್ಟಿ ಮಾತನಾಡಿ ಮುಸಲ್ಮಾನ ಬಂಧುಗಳ ಮನಸ್ಸು ಕೆಡಿಸುವಂತಹ ಕೆಲಸಗಳು ನಡೆಯುತ್ತಿದೆ. ರಾಷ್ಟ್ರ ವಿರೋಧಿ ಸಂಘಟನೆಗಳ ಮಾತುಗಳನ್ನು ಕೇಳಬೇಡಿ. ಹಿಜಾಬ್ ನಂತಹ ಪ್ರತ್ಯೇಕ ಸಂಕೇತಗಳಿಂದ ಹೊರ ಬಂದು ಈ ದೇಶದ ಸಂಸ್ಕೃತಿ, ಸಂಸ್ಕಾರಗಳಿಗೆ ಗೌರವ ಕೊಡಲು ಕಲಿಯಿರಿ. ಇಲ್ಲಿನ ದೇಶದ ಸಂಸ್ಕೃತಿಗೆ, ಧರ್ಮಕ್ಕೆ ಗೌರವ ಕೊಟ್ಟು ಬದುಕಲು ಸಾಧ್ಯವಿಲ್ಲದಿದ್ದರೆ ದೇಶ ಬಿಟ್ಟು ಹೋಗಬಹುದು ಎಂದರು.

ಮೂಡುಬಿದಿರೆ ವಿಶ್ವ ಹಿಂದೂ ಪರಿಷತ್ ಕಾರ್ಯಾಧ್ಯಕ್ಷ ಶ್ಯಾಮ ಹೆಗ್ಡೆ, ಬಜರಂಗದಳ ಮೂಡುಬಿದಿರೆ ತಾಲೂಕು ಸಂಚಾಲಕ ಅಭಿಲಾಷ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬೆಳುವಾಯಿ ಭಾಸ್ಕರ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ಸುನಿಲ್ ಪಣಪಿಲ ವಂದಿಸಿದರು.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest


0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles