ವಿಟ್ಲ: ಹೆಚ್ಚು ಟಿವಿ ನೋಡಬೇಡ ಎಂದು ಹೆತ್ತವರು ಬುದ್ಧಿವಾದ ಹೇಳಿದ್ದಕ್ಕೆ ಬಾಲಕನೋರ್ವ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲದ ಪುಚ್ಚೆಗುತ್ತು ಎಂಬಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಬಾಲಕನನ್ನು ಜೋಗಿಬೆಟ್ಟು ವಾಮನ ಪೂಜಾರಿ ಅವರ ಮಗ ಉಜ್ವಲ್(14) ಎಂದು ಗುರುತಿಸಲಾಗಿದೆ. ಹೆತ್ತವರು ಟಿವಿ ಹೆಚ್ಚು ನೋಡಬಾರದು ಎಂದು ಬಾಲಕನಿಗೆ ಬುದ್ದೀವಾದ ಹೇಳಿದ್ದಕ್ಕೆ ಬೇಸರಗೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.